ಸಿದ್ದರಾಮಯ್ಯ- ಮುರಳೀಧರನ್ ಟ್ವೀಟ್ ವಾರ್ ಮುಂದುವರಿಕೆ
ಬೆಂಗಳೂರು, ಏಪ್ರಿಲ್ 22: ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ. ಪ್ರಾದೇಶಿಕ ಅಸಮತೋಲನವಾಗುತ್ತಿದೆ ಎಂಬ ಕೂಗಿದೆ ಬಲ ತರುವಂಥ ಟ್ವೀಟೊಂದನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗರಿಗೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಎಂದು ಟ್ವೀಟ್ ಮಾಡುವ ಕನ್ನಡಿಗರ ಕೆಚ್ಚೆಬ್ಬಿಸಿದ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು, ಮುರಳೀಧರ್ ರಾವ್ ಅವರು ಕೂಡಾ ಕನ್ನಡ ಭಾಷೆ ಲಿಪಿ ಬಳಸಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಹಿಂದಿ ಟ್ವೀಟ್ಗೆ ಸಿದ್ದರಾಮಯ್ಯ ಎದಿರೇಟು, ಉಘೇ ಉಘೇ ಎಂದ ಟ್ವಿಟ್ಟಿಗರು
'ಏನ್
ಸಿದ್ದರಾಮಯ್ಯನವ್ರೇ
ಹೆದರಿಬಿಟ್ರಾ?
ಭಾರೀ
ಮಸಲತ್ತು
ಮಾಡಿ
ಚಾಮುಂಡೇಶ್ವರಿ
ಕ್ಷೇತ್ರ
ಆರಿಸಿಕೊಂಡ್ರಿ.
ಈಗ
ಭಯದಿಂದ
ಎರಡು
ದೋಣಿಯಲ್ಲಿ
ಕಾಲಿಡಲು
ಹೊರಟಿದ್ದೀರಿ!
ಚಿಂತೆ
ಬೇಡ,
ನೀವೆಲ್ಲಿ
ಸ್ಪರ್ಧಿಸಿದರೂ
ನಾವು
ಪೂರ್ತಿ
ಕರ್ನಾಟಕವನ್ನೇ
ಕಾಂಗ್ರೆಸ್
ಮುಕ್ತ
ಮಾಡುತ್ತೇವೆ'
ಏನ್ ಸಿದ್ದರಾಮಯ್ಯನವ್ರೇ ಹೆದರಿಬಿಟ್ರಾ?
— P Muralidhar Rao (@PMuralidharRao) April 21, 2018
ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಕ್ಷೇತ್ರ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ! ಚಿಂತೆ ಬೇಡ, ನೀವೆಲ್ಲಿ ಸ್ಪರ್ಧಿಸಿದರೂ ನಾವು ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. https://t.co/rPZ2XI1NEI
ಬಿಜೆಪಿಯ ಮುರಳೀಧರ ರಾವ್ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ, ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು 'ಕನ್ನಡ ಅಥವಾ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿ ಸರ್ ಹಿಂದಿ ಅರ್ಥವಾಗುವುದಿಲ್ಲ' ಎಂದು ಮರು ಟ್ವೀಟ್ ಮಾಡಿದ್ದರು.
ಸಿದ್ಧರಾಮಯ್ಯ ಸರ್, ನೀವು ಮತ್ತು ನಿಮ್ಮವರು ಹಿಂದಿ, ಉರ್ದು ಭಾಷೆಗಳಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥಾ ಆಗಿರ್ಲಿಲ್ಲ ಸರ್. pic.twitter.com/wYoe34SZ8E
— BJP Karnataka (@BJP4Karnataka) April 21, 2018
ಸಿದ್ದರಾಮಯ್ಯ ಅವರ ಟ್ವೀಟ್ ಕುರಿತಂತೆ ಆರೋಗ್ಯಕರ ಚರ್ಚೆಯೂ ನಡೆದಿದೆ. ಕೆಲವರು, ಮುಖ್ಯಮಂತ್ರಿಗಳಿಗೆ ರಾಷ್ಟ್ರಭಾಷೆ ಹಿಂದಿ ಬರುವುದಿಲ್ಲವೇ ಎಂದು ಕಾಲೆಳೆದರೆ ಅವರಿಗೆ ಕ್ಲಾಸ್ ತೆಗೆದಿರುವ ಕೆಲವರು ಎಲ್ಲವೂ ಆಡಳಿತ ಭಾಷೆಯಷ್ಟೆ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದಾರೆ.