ಕಾಂಗ್ರೆಸ್ಸಿನ ಹಿಂಬಾಗಿಲ ರಾಜಕಾರಣಕ್ಕೆ ಸಂಸದ ಅನಂತಕುಮಾರ್ ಕಿಡಿ
ಬೆಂಗಳೂರು, ಮೇ 16: 'ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಗೆ ಮಣೆ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಅಗ್ರನಾಯಕರು ಜನಾದೇಶವನ್ನು ಒಪ್ಪಿಕೊಳ್ಳಬೇಕು' ಎಂದು ಸಂಸದ, ಕೇಂದ್ರ ಸಚಿವ ಅನಂತಕುಮಾರ್ ಅವರು ಹೇಳಿದ್ದಾರೆ.
ಕಾಂಗ್ರೆಸ್
ಪಕ್ಷ
ಈ
ತಿರಸ್ಕಾರವನ್ನು
ಒಪ್ಪಿಕೊಂಡು
ವಿರೋಧ
ಪಕ್ಷ
ಸ್ಥಾನವನ್ನು
ಒಪ್ಪಿಕೊಳ್ಳಬೇಕು.
ಅದರ
ಬದಲಾಗಿ
ಹಿಂಬಾಗಿಲ
ರಾಜಕಾರಣ
ಮಾಡಬಾರದು.
ನಾವು
ನಿನ್ನೆ
ರಾಜ್ಯಾಪಾಲರನ್ನು
ಭೇಟಿಯಾಗಿದ್ದೇವು,
ಈ
ವೇಳೆ
ಯಡಿಯೂರಪ್ಪರನ್ನು
ಸರ್ಕಾರ
ರಚನೆ
ಮಾಡುವಂತೆ
ಆಹ್ವಾನಿಸುವಂತೆ
ಮನವಿ
ಮಾಡಿದೆವು.
ಅದರಂತೆ,
ಸರ್ಕಾರ
ರಚನೆ
ಕಾರ್ಯ
ನಡೆಯಲಿದೆ
ಎಂದರು.
ಕಾಂಗ್ರೆಸ್ ಪಕ್ಷವನ್ನು 21 ಕಡೆ ತಿರಸ್ಕರಿಸಿದ್ದಾರೆ. ಅದೇ ರೀತಿಯಾಗಿ ಕರ್ನಾಟಕದಲ್ಲಿಯೂ ತಿರಸ್ಕರಿಸಿದ್ದಾರೆ. ಆದರೆ, ಕಾಂಗ್ರೆಸ್ ನವರು ಷಡ್ಯಂತ್ರದ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದರು.
ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!
ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಬಿಜೆಪಿ ಸರ್ಕಾರ ರಚನೆಯಾಗಲಿದೆ. ಸದನದಲ್ಲಿ ಬಹುಮತ ಸ್ಥಾಪಿಸಲಿದ್ದೇವೆ. ಕಾಂಗ್ರೆಸ್ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ಹೇಳಿದರು.