ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುದಾನ ರಹಿತ ಶಾಲೆಗಳ ಆವರಣದಲ್ಲಿ ಸಂಘಟನೆಗಳ ಪ್ರವೇಶ ನಿರ್ಬಂಧ

|
Google Oneindia Kannada News

ಬೆಂಗಳೂರು, ಫೆಬ್ರವರಿ 17 : ಆರ್ ಟಿ ಐ ಹಾಗೂ ಸ್ವಯಂಘೋಷಿತ ಸಂಘಟನೆಗಳು ಶಾಲೆಗಳ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಖಾಸಗಿ ಅನುದಾನರಹಿತ ಶಾಲೆಗಳ ಆವರಣವನ್ನು ಸೂಕ್ಷ್ಮ ಹಾಗೂ ಶೂನ್ಯ ಅಪರಾಧ ಪ್ರದೇಶವನ್ನಾಗಿಸಲು ರಾಜ್ಯ ಸರ್ಕಾರವು ಆರ್‌ಟಿಇ, ಆರ್‌ಟಿಐ ಹಾಗೂ ಸ್ವಯಂಘೋಷಿತ ಸಂಘಟನೆಗಳ ಅತಿಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಇನ್ಮೇಲೆ ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಬೀಳುತ್ತಾ?!ಇನ್ಮೇಲೆ ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಬೀಳುತ್ತಾ?!

ಖಾಸಗಿ ಶಾಲೆಗಳ ಆವರಣದೊಳಗೆ ಮಕ್ಕಳ ಪೋಷಕರಲ್ಲದೆ ಇತರೆ ವ್ಯಕ್ತಿಗಳ ಅತಿಕ್ರಮ ಪ್ರವೇಶವನ್ನು ನಿರ್ಬಂಧಿಸುವ ಸಂಬಂಧ ಪ್ರತ್ಯೇಕ ಸುರಕ್ಷತಾ ಕಾನೂನು ರಚಿಸಿ ಭದ್ರತೆ ಒದಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

Education Department sought restriction on entry for private schools

ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್‌ಟಿಇ, ಆರ್‌ಟಿಐ ಹಾಗೂ ಎನ್‌ಜಿಒ ಅಥವಾ ಸ್ಥಳೀಯ ಸ್ವಯಂಘೋಷಿತ ಸಂಘಟನೆಗಳು ನಿಯಮಬಾಹಿರವಾಗಿ ಪ್ರವೇಶಿಸಿ ದಾಂಧಲೆ, ಬೆದರಿಕೆ ಹಾಗೂ ಮಾನನಷ್ಟ ಉಂಟು ಮಾಡುತ್ತಿವೆ.

ಇದರಿಂದ ಮಕ್ಕಳ ಹಕ್ಕು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಶಾಲಾ ಆವರಣವನ್ನು ಸೂಕ್ಷ್ಮ ಹಾಗೂ ಶೂನ್ಯ ಅಪರಾಧ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿ ಸಲ್ಲಿಸಿದ ಮನವಿ ಮೇರೆಗೆ ಶಿಕ್ಷಣ ಸಚಿವರು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈ ಪತ್ರ ಬರೆದಿದ್ದಾರೆ.

English summary
Department of public instructions minister Tanveer Sait sought impose restrictions entry for private educational institutions to prevent from organizations which exort for seats and money in the name of implementing RTE and etc.ಆರ್ ಟಿ ಐ ಹಾಗೂ ಸ್ವಯಂಘೋಷಿತ ಸಂಘಟನೆಗಳು ಶಾಲೆಗಳ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X