ಯಾರದ್ದೋ ಬೆಂಬಲ ಸಿಗುತ್ತದೆ ಎಂದು ನಾನು ಹೇಳಿಕೆ ನೀಡಿಲ್ಲ: ಡಿ.ಕೆ. ಶಿವಕುಮಾರ್
Recommended Video
ಬೆಂಗಳೂರು, ಅಕ್ಟೋಬರ್ 20: ಲಿಂಗಾಯತ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ತಾವು ನೀಡಿದ ಹೇಳಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಧರ್ಮ: ಕ್ಷಮೆ ಕೋರಿಕೆಯ ಹೇಳಿಕೆಗೆ ಬದ್ಧ ಎಂದ ಡಿಕೆ ಶಿವಕುಮಾರ್
ಯಾರದ್ದೋ ಬೆಂಬಲ ಸಿಗುತ್ತದೆ ಎಂದು ನಾನು ಈ ರೀತಿ ಹೇಳಿಕೆ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಮಠಾಧೀಶರ ಬೆಂಬಲ ಮುಖ್ಯವಲ್ಲ. ನನ್ನ ಆತ್ಮಸಾಕ್ಷಿಯಂತೆ ನಾನು ಹೇಳಿಕೆ ನೀಡಿದ್ದೇನೆ. ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ನನ್ನ ಹೇಳಿಕೆಗೆ ಈಗಲೂ ಬದ್ಧ. ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದೇನೆ. ಐ ವಿಲ್ ನೆವರ್ ಗೋ ಬ್ಯಾಕ್ ಮೈ ವರ್ಡ್ಸ್. ಬಹಳ ಸುದೀರ್ಘವಾಗಿ ಯೋಚನೆ ಮಾಡಿ ಹೇಳಿಕೆ ನೀಡಿದ್ದೇನೆ. ನಾನು ನನ್ನ ಮಾಡುಗಳಿಂದ ಹಿಂದೆ ಸರಿಯುವುದಿಲ್ಲ.
ಒಕ್ಕಲಿಗರ ಸಂಘದ ವಿಚಾರದಲ್ಲಿ ರಾಜಿಗೆ ಹೋಗಿದ್ದೆ. ಬಳಿಕ ಬೇಡವೆಂದು ಅಲ್ಲಿಂದ ಹಿಂದಕ್ಕೆ ಬಂದೆ. ಹಿರಿಯರು, ಮಠಾಧೀಶರು ಅದನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಯಾಚಿಸಬೇಕು: ಮಾತೆ ಮಹಾದೇವಿ
ಹೋರಾಟ
ನಿಲ್ಲಿಸುವುದಿಲ್ಲ
ಡಿ.ಕೆ.
ಶಿವಕುಮಾರ್
ಯಾವ
ಲೆಕ್ಕಾಚಾರದಲ್ಲಿ
ಈ
ಹೇಳಿಕೆ
ನೀಡಿದ್ದಾರೆ
ಎಂದು
ರಾಜ್ಯದ
ಜನತೆಗೆ
ಸ್ಪಷ್ಟನೆ
ನೀಡುವಂತೆ
ಲಿಂಗಾಯತ
ಮಹಾಸಭಾದ
ಪ್ರಧಾನ
ಕಾರ್ಯದರ್ಶಿ
ಜಾಮದಾರ್
ಆಗ್ರಹಿಸಿದ್ದಾರೆ.
ಹೋರಾಟವನ್ನು ಅರ್ಧಕ್ಕೆ ನಿಲ್ಲಿಸಿದರೆ ತೋಂಟದಾರ್ಯ ಸ್ವಾಮೀಜಿಗಳಿಗೆ ನಾವು ಅನ್ಯಾಯ ಮಾಡಿದಂತೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಹೋರಾಟ ನಿಲ್ಲಿಸಬಾರದು. ಹೀಗಾಗಿ ಹೋರಾಟ ಮುಂದುವರಿಸುತ್ತೇವೆ.
ಡಿ.ಕೆ. ಶಿವಕುಮಾರ್ ಸಚಿವರಾಗಿದ್ದಾಗ ಮೂರು ಬಾರಿ ಸಭೆ ನಡೆಸಲಾಗಿತ್ತು. ಆ ಎಲ್ಲ ಸಭೆಗಳಲ್ಲಿಯೂ ಭಾಗವಹಿಸಿದ್ದ ಅವರು ಏಕೆ ಮಾತನಾಡಿರಲಿಲ್ಲ. ಈಗೇಕೆ ಆತ್ಮಸಾಕ್ಷಿ ಎಚ್ಚರಿಕೆ ಆಯ್ತು? ಏಳು ತಿಂಗಳ ಬಳಿಕ ಏಕೆ ಈ ರೀತಿ ಹೇಳಿಕೆ ನೀಡುತ್ತಿದ್ದೀರಿ? ಷಡ್ಯಂತ್ರದಿಂದ ಸಮರ್ಥನೆಯ ಮಾತುಗಳನ್ನು ಆಡುತ್ತಿದ್ದಾರೆ.