ಬಿಜೆಪಿ ನಮ್ಮ ಶಾಸಕರನ್ನು ಸೆಳೆಯುವ ವಿಫಲ ಯತ್ನ ಮಾಡುತ್ತಿದೆ: ದಿನೇಶ್
ಬೆಂಗಳೂರು, ಜನವರಿ 15: ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ವಿಫಲ ಪ್ರಯತ್ನ ಮಾಡುತ್ತಿದೆ, ಎಂದಿಗೂ ಬಿಜೆಪಿ ಸಫಲವಾಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸರ್ಕಾರವನ್ನು ಬೀಳಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ, ನಮ್ಮ ಕೆಲವು ಶಾಸಕರನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಅದು ಎಂದಿಗೂ ಸಾಧ್ಯವಿಲ್ಲ, ನೀತಿ ವಂತರು, ಧರ್ಮ ಪಾಲನೆ ಮಾಡುವವರು ಎಂದು ಹೇಳುತ್ತಾರಲ್ಲಾ ಆದರೆ ಅವೆಲ್ಲವನ್ನೂ ಗಾಳಿಗೆ ತೂರಿದ್ದಾರೆ.
ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್
ಎಲ್ಲಾ
ಶಾಸಕರು
ಸಂಪರ್ಕದಲ್ಲಿದ್ದಾರೆ
ಅವರ
ಮೇಲೆ
ಒತ್ತಡ
ಹೇರುವಂತ
ಕೆಲಸ
ಮಾಡಲಾಗುತ್ತಿದೆ.
ನಮ್ಮ
ಮೈತ್ರಿ
ಸರ್ಕಾರ
ಇನ್ನಷ್ಟು
ಗಟ್ಟಿಯಾಗುತ್ತೆ
ನೋಡ್ತಾ
ಇರಿ
ಎಂದರು.
ನಮ್ಮೆಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡುವ ಅಗತ್ಯವಿರಲಿಲ್ಲ, ಹೇಸಿಗೆ ತರಿಸಿದೆ, ನಾವೇನು ಮಾಡಬೇಕೊ ಅದನ್ನು ಮಾಡುತ್ತೇವೆ ಎಂದು ಹೇಳಿದರು.
Comments
bengaluru coalition government bjp congress mla ಬೆಂಗಳೂರು ದಿನೇಶ್ ಗುಂಡೂರಾವ್ ಕೆಪಿಸಿಸಿ ಬಿಜೆಪಿ ಶಾಸಕ ಸಮ್ಮಿಶ್ರ ಸರ್ಕಾರ
English summary
KPCC president Dinesh Gundurao has alleged that the Bjp is trying to grab Congress MLAs but they won't be able to topple the coalition government in the state.
Story first published: Tuesday, January 15, 2019, 15:52 [IST]