ರಾಹುಲ್ ಬಳಿ ಯಾರ ಮೇಲೂ ದೂರು ಹೇಳಿಲ್ಲ: ಎಚ್ಡಿಕೆ
Recommended Video
ಬೆಂಗಳೂರು, ಜೂನ್ 20: ನವದೆಹಲಿಯಲ್ಲಿ ಸೋಮವಾರ ತಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಾರನ್ನೂ ಧೂಷಣೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ 'ಮಾಧ್ಯಮ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಯಾರನ್ನೂ ದೂಷಣೆ ಮಾಡಿಲ್ಲ ಎಂದರು.
ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ
ಮುಖ್ಯಮಂತ್ರಿಯಾಗಿ ರಾಜಧರ್ಮವನ್ನು ಪಾಲಿಸಲು ಕೇವಲ ಸಲಹೆಗಳನ್ನು ಪಡೆದು ಬಂದಿದ್ದೇನೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.
ಒಂದು ವರ್ಷ ಮಾತ್ರ ಸರ್ಕಾರ ಇರುತ್ತದೆ ಎಂದು ತಾವು ಹೇಳಿಲ್ಲ ಎಂದ ಕುಮಾರಸ್ವಾಮಿ, ಲೋಕಸಭೆ ಚುನಾವಣೆವರೆಗೂ ಇದ್ದೇ ಇರುತ್ತದೆ ಎಂದು ಹೇಳಿದ್ದೆನೇ ಹೊರತು ಲೋಕಸಭೆ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದು ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರು.
ಕುತೂಹಲ ಮೂಡಿಸಿದ ಎಚ್ಡಿಕೆ-ಜಮೀರ್ ಅಹ್ಮದ್ ಭೇಟಿ
ಆದಷ್ಟು ಸನಿಹದಲ್ಲೇ ಸಚಿವ ಸಂಪುಟದಲ್ಲಿ ಬಜೆಟ್ ಅಧಿವೇಶನದ ದಿನಾಂಕವನ್ನು ನಿಷ್ಕರ್ಷೆಗೊಳಿಸಿ ಜುಲೈ ಮೊದಲನೆಯ ಅಥವಾ ಎರಡನೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲು ಯೋಜಿಸಿದ್ದೇನೆ ಎಂದು ಕುಮಾರಸ್ವಾಮಿ ವಿವರಿಸಿದರು.