ಶತರುದ್ರಯಾಗ ಲೋಕಕಲ್ಯಾಣಕ್ಕೆ, ಶತ್ರು ನಾಶಕ್ಕಲ್ಲ: ದೇವೇಗೌಡ
ಬೆಂಗಳೂರು, ಜನವರಿ 15: ಶೃಂಗೇರಿ ಮಠದಲ್ಲಿ ಶತರುದ್ರಮಹಾಯಾಗ ಮಾಡಿದ ದೇವೇಗೌಡರು ಆ ಯಾಗ ಮಾಡಿದ್ದು ಲೋಕಕಲ್ಯಾಣಕ್ಕಾಗಿಯೇ ಹೊರತು ಶತ್ರು ನಾಶಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶತ್ರು ನಾಶಕ್ಕೆ ಶತಚಂಡಿ ಯಾಗ ಮಾಡುತ್ತಾರೆ ಆದರೆ ನಾನು ಮಾಡಿದ್ದು ಆ ಯಾಗವನ್ನಲ್ಲ ಇದನ್ನು ಲೋಕಕಲ್ಯಾಣಕ್ಕಾಗಿ ಮಾಡಿದ್ದೇನೆ ಎಂದಿದ್ದಾರೆ.
ಶೃಂಗೇರಿಯಲ್ಲಿ ಅತಿರುದ್ರಯಾಗ ನಿಲ್ಲಿಸಲ್ಲ :ದೇವೇಗೌಡರ ಕುಟುಂಬ
ಸಾಮರಸ್ಯ ಹಾಳು ಮಾಡುವುದು, ಬೇರೆಯವರ ವಿನಾಶ ಭಯಸುವುದು, ಮನುಷ್ಯರ ನಡುವೆ ಗೋಡೆ ಕಟ್ಟುವುದು ಹಿಂದೂ ಫಿಲಾಸಪಿ ಅಲ್ಲ, ಎಲ್ಲರಿಗೂ ಒಳಿತು ಕೋರುವುದು ಹಿಂದೂ ಧರ್ಮದ ಮೂಲ ಉದ್ದೇಶ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೂ ಸಹ ಇದೇ ಮಾತು ಹೇಳಿದ್ದು, ಯಾರ ವಿನಾಶವನ್ನೂ ನಾವು ಭಯಸುವುದಿಲ್ಲ, ಒಳಿತಾಗಲಿ ಎಂದು ಯಾಗ ಮಾಡಿಸಿದ್ದೇವೆ ಎಂದಿದ್ದಾರೆ.
ನಂತರ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ ಎಚ್.ಡಿ.ಕುಮಾರಸ್ವಾಮಿ 'ಕೊಲ್ಲೂರಿನಲ್ಲಿ ಶತಚಂಡಿಕಾ ಹೋಮ ಮಾಡಿಸಿದ ಕಾಂಗ್ರೆಸ್ ಸಚಿವರು ಯಾರೆಂದು ಎಲ್ಲರಿಗೂ ಗೊತ್ತಿರುವುದೇ ಅಲ್ಲವೇ' ಎಂದರು.