ಖಿನ್ನತೆಗೆ ಉತ್ತಮ ಭರವಸೆಯೇ ಮದ್ದು: ದೀಪಿಕಾ
ಬೆಂಗಳೂರು, ಡಿಸೆಂಬರ್ 18: ಬಾಲಿವುಡ್ ಶ್ರೇಷ್ಠನಟಿ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಯಾವಾಗ ಬಂದರೂ ಉತ್ತಮ ಸ್ವಾಗತವೇ ಸಿಗುತ್ತದೆ ಆದರೆ ಅವರು ಐಐಎಂಬಿ ಲೀಡರ್ ಶಿಪ್ ಸಮ್ಮಿಟ್ 2016 ಭಾಗವಹಿಸಿದ್ದು ಮಾತ್ರ ವಿಶೇಷವಾಗಿತ್ತು.
ಭವಿಷ್ಯದ ಉತ್ತಮ ವ್ಯಾಪಾರಿ ನಾಯಕರು ಮತ್ತು ಪ್ರಸ್ತುತದ ಪ್ರೀಮಿಯರ್ ಬಿಸಿನೆಸ್ ಸ್ಕೂಲಿನ ಉತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಸಂಬಂಧ ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬೆಂಗಳೂರು ಕಾರ್ಯಕ್ರಮದಲ್ಲಿ ಯಾರು ವಿಶೇಷ ಆಹ್ವಾನಿತರು ಎಂಬುದು ವಿಕ್ಷಕರಿಗೆ ತಿಳಿದಿರಲಿಲ್ಲ.
ಆದರೆ
ಕೆಲವು
ಹೊತ್ತಿನ
ಹಿಂದೆ
ಕೇಂದ್ರ
ಸಚಿವ
ಪಿಯೂಶ್
ಗೋಯಲ್
ಮತ್ತು
ಇನ್ಫೋಸೀಸ್
ಬೋರ್ಡಿನ
ಮೆಂಬರ್
ಮೋಹನ್
ದಾಸ್
ಬರುವರೆಂದು
ತಿಳಿಯಿತು.
ಬಾಲಿವುಡ್
ತಾರೆ
ದೀಪಿಕಾ
ಪಡುಕೋಣೆ
ಬರುವೆಂದು
ತಿಳಿದನಂತರ
ಜನರಿಗೆ
ಆಶ್ಚರ್ಯವಾಯಿತು.
ಐಐಎಂಬಿ
ಬೋರ್ಡಿನ
ಮುಖ್ಯಸ್ಥರು
'ನಮ್ಮ'
ದೀಪಿಕಾ
ಪಡುಕೋಣೆ
ಎಂದು
ಅವರನ್ನು
ವೇದಿಕೆಗೆ
ಸ್ವಾಗತಿಸಿದರು.[ದೀಪಿಕಾಳಿಂದ
ದಿ
ಲಿವ್
ಲವ್
ಲಾಫ್
ಫೌಂಡೇಷನ್]
ದೀಪಿಕಾ ಪಡುಕೊಣೆಯವರು ಹಿರಿಯ ಪತ್ರಕರ್ತ ಶೇಖರ್ ಗುಪ್ತ ಅವರೊಂದಿಗೆ ಪಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲು ಅನುಭವಿಸಿದ ಮಾನಸಿಕ ಖಿನ್ನತೆ ಕುರಿತಾಗಿ ಮಾತನಾಡಿದರು.ದೀಪಿಕಾ ಅವರು ತಮ್ಮ ಸ್ವಂತ ಅನುಭವದ ಮಾತಗಳನ್ನಾಡಿ ಖಿನ್ನತೆಗೆ ಉತ್ತಮ ವಿಶ್ವಾಸ, ಭರವಸೆ ಹೊಂದಿದರೆ ಖಿನ್ನತೆಯಿಂದ ಹೊರಬರಬಹುದೆಂದರು.
ನಾನು ನಟಿಯಾಗಿ ಯಾವುದೇ ರಾಜಕೀಯ ವಿಷಯವನ್ನು ಮಾತನಾಡುವುದಿಲ್ಲ ಎಂದರು. ಇನ್ನು ಖಿನ್ನತೆಗೆ ಸಂಬಂಧಿಸಿದ ಯಾವ ವಿಷಯವಾದರೂ ಮಾತನಾಡೋಣ ಎಂದು ನಯವಾಗಿ ಜಾರಿಕೊಂಡರು.
ಚಿತ್ರ ನಟ ನಟಿಯರು ಕೆಟ್ಟ ಮತ್ತು ಒಳ್ಳೆಯ ಘಟನೆಗಳನ್ನು ಅನುಭವಿಸುತ್ತಿರುತ್ತಾರೆ. ಅದರೆ ಜನರನ್ನು ಒಳ್ಳೆಯದನ್ನು ನಿರೀಕ್ಷಿಸಿ ಜನರಿಗೆ ಒಳ್ಳೆಯದನ್ನು ಬಯಸುತ್ತಾರೆ.