ಚಂದಾಪುರ ಬಳಿ ಭೀಕರ ಅಪಘಾತ, ಬೈಕ್ ಸವಾರಿಬ್ಬರು ಸಾವು
ಆನೇಕಲ್, ಸೆ. 19: ಆನೇಕಲ್ ವಿಧಾನಸಭಾ ಕ್ಷೇತ್ರದ ಚಂದಾಪುರದ ರೈಲ್ವೆ ಸೇತುವೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಂಟೈನರ್ ಲಾರಿ ಹರಿದು ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಹೊಸೂರು
ಮುಖ್ಯರಸ್ತೆಯ
ಸಮೀಪವಿರುವ
ಚಂದಾಪುರ
ರೈಲ್ವೆ
ಬ್ರಿಡ್ಜ್
ಬಳಿ
ಮೃತಪಟ್ಟ
ಬೈಕ್
ಸವಾರರಿಬ್ಬರನ್ನು
ರಾಮಸಾಗರದ
ವೆಂಕಟಪ್ಪ
ಮತ್ತು
ನಾರಾಯಣಪ್ಪ
ಎಂದು
ಗುರುತಿಸಲಾಗಿದೆ.
ಹೊಸೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಹಿಂಬದಿಯಿಂದ ಕಂಟೈನರ್ ಡಿಕ್ಕಿ ಹೊಡೆದಿದೆ. ನಂತರ ಬೈಕ್ ಸವಾರರ ಮೇಲೆ ವಾಹನ ಹರಿದಿದ್ದು, ಚಕ್ರಕ್ಕೆ ಇಬ್ಬರ ದೇಹ ಸಿಲುಕಿದೆ.
ಕಂಟೈನರ್ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೂರ್ಯನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.
Comments
English summary
Two people were killed after a container vehicle rammed into a two-wheeler near Chandapura railway bridge in Anekal. Deceased have been identified as Venkatappa and Narayanappa. A case has been registered at Suryanagar police station, Anekal.
Story first published: Tuesday, September 19, 2017, 16:27 [IST]