ತಾಹೀರ್ ಬಂಧನ ಬಿಚ್ಚಿಟ್ಟ ಮತ್ತೊಂದು ಪ್ರಕರಣ
ಬೆಂಗಳೂರು, ಡಿಸೆಂಬರ್ 09: ರವಿ ಬೆಳಗೆರೆ ಪ್ರಕರಣ ಹೊರಬರಲು ಮೂಲ ವ್ಯಕ್ತಿಯಾದ ಅಕ್ರಮ ಬಂದೂಕು ಮಾರಾಟಗಾರ ಹಾಗೂ ಸುಪಾರಿ ಕೊಲೆಗಾರ ತಾಹೀರ್ ತನ್ನ ಮತ್ತೊಂದು ಸಂಚಿನ ಬಗ್ಗೆ ಸಿಸಿಬಿ ಪೊಲೀಸರಿಗೆ ಬಾಯಿ ಬಿಟ್ಟಿದ್ದಾನೆ.
ಸಿಸಿಬಿ ತನಿಖೆ ವೇಳೆ ಉದ್ಯಮಿ ರಮೇಶ್ ಎನ್ನುವರ ಮಗನನ್ನು ಕಿಡ್ನಾಫ್ ಮಾಡಲು ಯತ್ನಸಿದ್ದಾಗಿ ತಾಹೀರ್ ಹೇಳಿದ್ದಾನೆ , ಯಲಹಂಕದ ಸುರಭಿ ಲೇಔಟ್ ನಲ್ಲಿ ರಮೇಶ್ ಅವರ ಮಗನಿಗಾಗಿ ಹೊಂಚು ಹಾಕಿ ಕಾರ್ಯ ಆಗದೆ ಸುಮ್ಮನಾಗಿದ್ದರ ಬಗ್ಗೆ ಆತ ಹೇಳಿದ್ದಾನೆ.
ಆತನ ಹೇಳಿಕೆ ಆಧರಿಸಿ ಸಿಸಿಬಿ ಪೊಲೀಸರು ತಾಹಿರ್ ಮೇಲೆ ಅಪಹರಣ ಯತ್ನ ದೂರನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಯಲಹಂಕ ಪೊಲೀಸರು ದೂರನ್ನು ದಾಖಲಿಸಿದ್ದಾರೆ.
ಮೊದಲಿಗೆ ತಾಹೀರ್ ನನ್ನು ವಿಚಾರಣೆ ನಡೆಸಿದಾಗಲೇ ಆತ ಸುಪಾರಿ ಹಂತಕ ಶಶಿದರ್ ಮುಂಡೇವಾಡಗಿ ಬಗ್ಗೆ ಮಾಹಿತಿ ನೀಡಿದ್ದ, ಸಿಸಿಬಿ ಪೊಲೀಸರು ಶಶಿಧರ್ ನನ್ನು ಬಂಧಿಸಿದಾಗ ರವಿ ಬೆಳಗೆರೆ ಅವರು ಆತನಿಗೆ ಸುನಿಲ್ ಹೆಗ್ಗರಹಳ್ಳಿ ಕೊಲೆ ಮಾಡಲು ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
Comments
English summary
Culprit Tahir opens up about an another crime, He conspired kidnap business man Ramesh's son in Yelhanka. but for some reason it wont happen. now Yelahanka police booked a case against Tahir.
Story first published: Saturday, December 9, 2017, 19:13 [IST]