ರಾಘವೇಶ್ವರರ ವಿರುದ್ಧ ಕಾದಂಬರಿಗೆ ನಿರ್ಬಂಧ ಹೇರಿದ ನ್ಯಾಯಾಲಯ
ಬೆಂಗಳೂರು, ನವೆಂಬರ್ 07:ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಯಾವುದೇ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವುದನ್ನು ತಡೆಗಟ್ಟಲು ಪ್ರತಿಬಂಧಕಾಜ್ಞೆ ಹೊರಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಅಂಗೀಕರಿಸಿದೆ.
ಮುಖ್ಯವಾಗಿ ಒಂದು ಕಾಲದಲ್ಲಿ ಶ್ರೀಮಠದಲ್ಲಿದ್ದು, ಸ್ವಾಮೀಜಿಗಳ ನಿಕಟವರ್ತಿಯಾಗಿದ್ದ ಅಭಿರಾಮ್ ಹೆಗ್ಡೆ ಅವರು ಬರೆಯಲು ಮುಂದಾಗಿದ್ದ ಕಾದಂಬರಿಗೆ ಬ್ರೇಕ್ ಹಾಕಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಸ್ವಾಮೀಜಿ ವಿರುದ್ಧ ಏನನ್ನೂ ಬರೆದಂತೆ ಕೈ ಕಟ್ಟಿ ಹಾಕಲಾಗಿದೆ.
ರಾಘವೇಶ್ವರ
ಸ್ವಾಮೀಜಿಗೆ
ಪುತ್ತೂರು
ನ್ಯಾಯಾಲದಿಂದ
ಸಮನ್ಸ್
ರಾಘವೇಶ್ವರ
ಸ್ವಾಮೀಜಿಗಳ
ಬಗ್ಗೆ
ತಾವು
ಬರೆಯಲು
ಉದ್ದೇಶಿಸಿದ್ದ
ಕಾದಂಬರಿಗೆ
ಮುನ್ನುಡಿ
ಎಂಬಂತೆ
ಅಭಿರಾಮ್
ಅವರು
ಇತ್ತೀಚೆಗೆ
ವೆಬ್
ತಾಣವೊಂದರಲ್ಲಿ
ರಾಘವೇಶ್ವರರ
ಬಗ್ಗೆ
ಬರೆದಿದ್ದರು.
ಇದಾದ
ಬಳಿಕ
ಈ
ಬಗ್ಗೆ
ಫೇಸ್
ಬುಕ್
ನಲ್ಲಿ
ಚರ್ಚೆ
ನಡೆದಿತ್ತು.
ಇದೆಲ್ಲವನ್ನು
ಗಮನಿಸಿದ
ಶ್ರೀಮಠದವರು,
ನ್ಯಾಯಾಲಯಕ್ಕೆ
ತೆರಳಿ
ಇಂಜೆಂಕ್ಷನ್
ಆರ್ಡರ್
ತರುವಲ್ಲಿ
ಯಶಸ್ವಿಯಾಗಿದ್ದಾರೆ.
ಸುಮಾರು 45 ಮಾಧ್ಯಮಗಳು ಸದರಿ ಪ್ರಕರಣಗಳಲ್ಲಿ ಯಾವುದೇ ಯಾವುದೇ ಮಾನಹಾನಿ ಮಾಹಿತಿಯನ್ನು ಜನರಿಗೆ ಪ್ರಚಾರ ಮಾಡದಂತೆ ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪಿಗೆಯನ್ನೂ ನೀಡಿದೆ ಎಂಬ ಮಾಹಿತಿ ಇದೆ.
ಗೋಕರ್ಣ
ದೇವಾಲಯ
ಮತ್ತೆ
ರಾಮಚಂದ್ರಾಪುರ
ಮಠದ
ಸುಪರ್ದಿಗೆ
ಇನ್ನೊಂದೆಡೆ, ತಮ್ಮ ಒಂದು ಕಾಲದ ಶಿಷ್ಯ, ನಂತರ ಸರಕಾರದ ಪರ ಸಾಕ್ಷಿದಾರನಾದ ಅಭಿರಾಮ್ ಗಣಪತಿ ಹೆಗಡೆ ವಿರುದ್ಧ ನ್ಯಾಯಾಲಯಕ್ಕೆ 'ಒರಿಜಿನಲ್ ಸೂಟ್' ಸಲ್ಲಿಸಿದ್ದಾರೆ.
ಏನಿದು ಕೇಸ್ : ಯುವತಿಯೊಬ್ಬರ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸರ್ಕಾರ ಪರ ಸಾಕ್ಷೀದಾರನಾಗಿರುವ ಅಭಿರಾಮ್ ಗಣಪತಿ ಹೆಗಡೆ ಅವರು, ತಮಗೆ ಬೆದರಿಕೆ ಕರೆಗಳು ಬರುತ್ತಿವೆ, ಈ ಪ್ರಕರಣದಲ್ಲಿ ಆರೋಪಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ಅಫಿಡವಿಟ್ ಸಲ್ಲಿಸಿದ್ದಾರೆ.
ರಾಘವೇಶ್ವರ
ಶ್ರೀಗಳ
ವಿರುದ್ಧ
ಸಿಐಡಿ
ಪೊಲೀಸರಿಂದ
ಪುತ್ತೂರು
ನ್ಯಾಯಾಲಯಕ್ಕೆ
ಆರೋಪ
ಪಟ್ಟಿ
ಸಲ್ಲಿಕೆ
ಈ ಕುರಿತಂತೆ ಕೋರ್ಟ್ ಆದೇಶ ಹೊರಡಿಸುವುದಕ್ಕೂ ಮುನ್ನ ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ಅಭಿರಾಮ್, "ನನಗೆ ಅಪ್ಪ, ಅಮ್ಮ, ಅಕ್ಕಂದಿರ ನೈತಿಕ ಬೆಂಬಲ ಇದೆ. ನಾನು ಸರಕಾರದ ಪರವಾಗಿ ಸಾಕ್ಷಿ ನುಡಿಯಲು ಒಪ್ಪಿಕೊಂಡವನು. ಅವರು ನನ್ನ ವಿರುದ್ಧ ಏನೇ ದಾಳಿ ನಡೆಸಿದರೂ ಅದು ಸರಕಾರದ ಅಧಿಕೃತ ಸಾಕ್ಷಿ ನಾಶ ಮಾಡುವ ಯತ್ನ ಅಷ್ಟೆ. ಎಷ್ಟೋ ಜನ ಭಕ್ತಿಯಿಂದಷ್ಟೆ ದಾಳಿಗೆ ಇಳಿದಿದ್ದಾರೆ. ಅವರಿಗೆ ಕಾನೂನಿನ ಅರಿವಿದ್ದಿದ್ದರೆ ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲ,'' ಎಂದು ಹೇಳಿದರು.