ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಸಭೆ
ಬೆಂಗಳೂರು, ಮೇ 25: ಸ್ಪೀಕರ್ ಆಯ್ಕೆ ಪ್ರಕ್ರಿಯೆಗೆ ವಿಧಾನಸೌಧಕ್ಕೆ ತೆರಳುವ ಮುನ್ನಾ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಹಿಲ್ಟನ್ ಹೊಟೆಲ್ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಿತು.
ಕರ್ನಾಟಕ ವಿಶ್ವಾಸಮತ LIVE:ಪರೀಕ್ಷೆ ಗೆಲ್ಲುತ್ತಾ ಜೆಡಿಎಸ್-ಕಾಂಗ್ರೆಸ್?
ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಡಿಕೆಶಿ ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಸ್ಪೀಕರ್ ಆಯ್ಕೆ ಮತ್ತು ವಿಶ್ವಾಸ ಮತಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ಮತ್ತು ಎಚ್ಚರಿಕೆಗಳನ್ನು ನೀಡಲಾಯಿತು. ಶಾಸಕಾಂಗ ಸಭೆಯಲ್ಲಿ ವಿಪ್ ಜಾರಿಯ ಕುರಿತೂ ಮಾಹಿತಿ ನೀಡಲಾಯಿತು.
ಜೆಡಿಎಸ್-ಕಾಂಗ್ರೆಸ್ ವಿಶ್ವಾಸಮತಕ್ಕೆ ಮುನ್ನ 7 ಪ್ರಮುಖ ಸಂಗತಿಗಳು
ಇಷ್ಟು ದಿನ ನಮ್ಮ ಜೊತೆಗೆ ಇದ್ದೀರಿ, ಸರ್ಕಾರ ರಚನೆಯ ಈ ಹೊತ್ತಿನಲ್ಲಿ ಯಾವುದೇ ಆಮೀಷಗಳಿಗೆ ಒಳಗಾಗದೆ ಮೈತ್ರಿ ಸರ್ಕಾರಕ್ಕೆ ವಿಶ್ವಾಸ ಮತ ನೀಡಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಮನವಿ ಮಾಡಿದರು.
ಶಾಸಕಾಂಗ ಸಭೆಗೆ ಡಿಕೆ ಶಿವಕುಮಾರ್ ಆಗಮಿಸಿಲ್ಲ ಎನ್ನಲಾಗಿತ್ತು, ಆದರೆ ಅವರು ತಡವಾಗಿ ಆಗಮಿಸಿದರು. ಅವರೊಬ್ಬರೆ ಅಲ್ಲದೆ ಹಲವು ಶಾಸಕರು ಸಭೆಗೆ ತಡವಾಗಿ ಆಗಮಿಸಿದರು.