ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೆಂಗಳೂರು ರಕ್ಷಿಸಿ'ಗೆ ವಿರುದ್ಧವಾಗಿ 'ನಮ್ಮ ಬೆಂಗಳೂರು ನಮ್ಮ ಹೆಮ್ಮೆ'

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 20: ಬಿಜೆಪಿ ಅವರು 'ಬೆಂಗಳೂರು ರಕ್ಷಿಸಿ' ಯಾತ್ರೆ ಆರಂಭಿಸಿರುವ ಬೆನ್ನಲ್ಲೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಪಕ್ಷವು 'ನಮ್ಮ ಬೆಂಗಳೂರು ನಮ್ಮ ಹೆಮ್ಮೆ' ಯಾತ್ರೆಗೆ ಇಂದು ಚಾಲನೆ ನಿಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನಿಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್ ಪ್ರಮುಖರು 'ನಾಳೆಯಿಂದಲೇ (ಮಾರ್ಚ್ 20) ಬೆಂಗಳೂರಿನ 28 ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷವು 'ನಮ್ಮ ಬೆಂಗಳೂರು ನಮ್ಮ ಹೆಮ್ಮೆ' ಯಾತ್ರೆ ನಡೆಸಲಿದೆ ಎಂದರು.

ಬೆಂಗಳೂರನ್ನು ಬಿಜೆಪಿಯಿಂದ ರಕ್ಷಣೆ ಮಾಡಿದ್ದೇವೆ: ರಾಮಲಿಂಗಾರೆಡ್ಡಿಬೆಂಗಳೂರನ್ನು ಬಿಜೆಪಿಯಿಂದ ರಕ್ಷಣೆ ಮಾಡಿದ್ದೇವೆ: ರಾಮಲಿಂಗಾರೆಡ್ಡಿ

ಈ ಸಂಬಂಧ ವೆಬ್‌ಸೈಟ್ ಸಹ ತೆರೆಯಲಾಗಿದ್ದು, ಬೆಂಗಳೂರಿಗೆ ಕಾಂಗ್ರೆಸ್‌ ಪಕ್ಷದ ಕೊಡುಗೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಜೊತೆಗೆ ಬೆಂಗಳೂರಿನ ವಿಶೇಷತೆಗಳ ಬಗ್ಗೆಯೂ ಸಂಪುರ್ಣ ಮಾಹಿತಿ ಅಲ್ಲಿ ದೊರಕಲಿದೆ.

congress announce Namma Bengaluru Namma Hemme campaign

'ನಮ್ಮ ಬೆಂಗಳೂರು, ನಮ್ಮ ಹೆಮ್ಮೆ' ಯಾತ್ರೆ ಪ್ರಯುಕ್ತ ನಗರದ ಎಲ್ಲಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಹಾಗೂ ಸಮಾವೇಶಗಳನ್ನು ಕಾಂಗ್ರೆಸ್ ಆಯೋಜಿಸಲಿದ್ದು, ಹಲವು ರಾಜ್ಯ ಮತ್ತು ರಾಷ್ಟ್ರ ನಾಯಕರುಗಳು ಹಾಗೂ ಸ್ಥಳೀಯ ನಾಯಕರು ಒಟ್ಟಿಗೆ ಈ ಯಾತ್ರೆಯ ಮೆರುಗು ಹೆಚ್ಚಿಸಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈಗಾಗಲೇ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರವಾಗಿ 'ನಮ್ಮ ಬೆಂಗಳೂರು, ನಮ್ಮ ಹೆಮ್ಮೆ' ಯಾತ್ರೆಯನ್ನು ಯೋಜಿಸಿದ್ದು ಬುದ್ದಿವಂತ ಬೆಂಗಳೂರಿಗರು ಯಾರ ಕೈಹಿಡಿಯುತ್ತಾರೆಯೋ ಕಾದು ನೋಡಬೇಕಿದೆ.

English summary
Congress announce today 'Namma Bengaluru Namma Hemme' campaign in Bengaluru. congress will doing 'Padayatre' rally in Bengaluru's all 28 constituency from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X