ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಬಿಜೆಪಿ ಸೇರಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಶಾಸಕ ಸುಧಾಕರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವದಂತಿಯನ್ನು ಅಲ್ಲಗಳೆದಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಡಾ ಸುಧಾಕರ್ ಭೇಟಿಯಾಗಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಹಾಸ್ಯಾಸ್ಪದ ಎಂದು ಟೀಕಿಸಿರುವ ಡಾ ಸುಧಾಕರ್ ಇಡೀ ವದಂತಿ ಕುರಿತಂತೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಏನಾದ್ರೂ ಆಗಬಹುದು: ಅತೃಪ್ತ ಕಾಂಗ್ರೆಸ್ ಶಾಸಕ ಸುಧಾಕರ್ ಮುಂದೆ ಏನಾದ್ರೂ ಆಗಬಹುದು: ಅತೃಪ್ತ ಕಾಂಗ್ರೆಸ್ ಶಾಸಕ ಸುಧಾಕರ್

ತಾವು ಬೆನ್ನುಹುರಿ ನೋವಿನಿಂದ ನರಳುತ್ತಿದ್ದು, ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ ಅದರ ಹಿನ್ನೆಲೆಯಲ್ಲೇ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ವಿಶ್ರಾಂತಿಗಾಗಿಯೇ ದಾಖಲಾಗಿದ್ದು, ತಾವು ಪಕ್ಷ ತೊರೆಯುವ ಬಗೆಗೆ ಪದೇ ಪದೇ ವದಂತಿ ಹಬ್ಬಿಸಲಾಗುತ್ತಿದೆ.

Cong MLA Dr Sudhakar clarified will not quit congress

ಸಿಎಂ ಜನರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರಿಡಬಾರದು ಎಂದ ಶಾಸಕ ಸಿಎಂ ಜನರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರಿಡಬಾರದು ಎಂದ ಶಾಸಕ

ಯಾವುದೇ ಕಾರಣಕ್ಕೂ ತಾವು ಬಿಜೆಪಿಯನ್ನು ಸೇರುವುದಿಲ್ಲ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಈ ವಿಚಾರಕ್ಕೆ ಭೇಟಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

English summary
Chikballapur MLA Dr Sudhakar has clarified that will not quit congress party as he was admitted for treatement in Jindal hospital Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X