ನೀರಿನ ಬಕೆಟ್ ಸೇರಿದ ವಿದ್ಯಾರ್ಥಿಗಳ ಮೊಬೈಲ್!
ಬೆಂಗಳೂರು, ಸೆ.3 : ತರಗತಿಯಲ್ಲಿ ಸಿಕ್ಕ ವಿದ್ಯಾರ್ಥಿಗಳ ಮೊಬೈಲ್ಗಳನ್ನು ಕಾಲೇಜಿನ ಎಂಡಿ ನೀರಿನ ಬಕೆಟ್ಗೆ ಹಾಕಿದ ಘಟನೆ ವಿದ್ಯಾರಣ್ಯಪುರದ ಶಾರದಾ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಮೊಬೈಲ್ಗಳನ್ನು ರಿಪೇರಿ ಮಾಡಿಸಿಕೊಡುವಂತೆ ಮಾಲೀಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಾರದಾ
ಸ್ಕೂಲ್
ಆಫ್
ಆರ್ಕಿಟೆಕ್ಚರ್
ಶಿಕ್ಷಣ
ಸಂಸ್ಥೆಯಲ್ಲಿ
ವಿದ್ಯಾರ್ಥಿಗಳು
ತರಗತಿ
ಅವಧಿಯಲ್ಲಿ
ಮೊಬೈಲ್
ಬಳಸುತ್ತಿರುವ
ಬಗ್ಗೆ
ಸಾಕಷ್ಟು
ದೂರುಗಳು
ಬಂದಿದ್ದವು.
ಆದ್ದರಿಂದ
ತರಗತಿಗೆ
ಮೊಬೈಲ್
ತರುವುದನ್ನು
ಆ.11ರಿಂದ
ನಿಷೇಧಿಸಲಾಗಿತ್ತು.
ಆದರೂ
ವಿದ್ಯಾರ್ಥಿಗಳು
ಮೊಬೈಲ್
ಬಳಕೆ
ಮಾಡುತ್ತಿರುವ
ಬಗ್ಗೆ
ಪೋಷಕರು
ಕಾಲೇಜಿನ
ಆಡಳಿತ
ಮಂಡಳಿಗೆ
ದೂರು
ನೀಡಿದ್ದರು.
ಮಂಗಳವಾರ ತರಗತಿಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ಶಿಕ್ಷಣ ಸಂಸ್ಥೆಯ ಮಾಲೀಕರಾದ ವೈ.ಎನ್.ಶರ್ಮಾ ಅವರು ಪರಿಶೀಲಿಸಿದಾಗ, ಮೂರು ಮೊಬೈಲ್ಗಳು ಪತ್ತೆಯಾದವು, ಅವುಗಳನ್ನು ನೀರಿನ ಬಕೆಟ್ ಹಾಕಿದ ಶರ್ಮಾ ಅವರು, ನಂತರ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಬೇಕಾಯಿತು. [ಮಹಿಳೆ ಮೊಬೈಲ್ ಬಳಸಿದರೆ 10 ಸಾವಿರ ದಂಡ]
ನೀರಿಗೆ ಹಾಕಿದ ಮೊಬೈಲ್ಗಳನ್ನು ರಿಪೇರಿ ಮಾಡಿಸಿಕೊಡುವಂತೆ ವಿದ್ಯಾರ್ಥಿಗಳು ವೈ.ಎನ್.ಶರ್ಮಾ ವಿರುದ್ಧ ಒಂದೂವರೆ ತಾಸು ಪ್ರತಿಭಟನೆ ನಡೆಸಿದರು. ಘಟನೆ ತಿಳಿದು ಕಾಲೇಜಿಗೆ ಆಗಮಿಸಿದ ವಿದ್ಯಾರಣ್ಯಪುರ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಂತರ ಶರ್ಮಾ ಅವರು, ಮೊಬೈಲ್ ರಿಪೇರಿ ಮಾಡಿಸಿಕೊಡಲು ಒಪ್ಪಿಗೆ ನೀಡಿದರು.
ಅಶ್ಲೀಲ ಸಂದೇಶ ರವಾನೆ : ಕಾಲೇಜಿನ 3ನೇ ಸೆಮಿಸ್ಟರ್ನ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ತರಗತಿ ಅವಧಿಯಲ್ಲಿ ಸಹಪಾಠಿಯ ಮೊಬೈಲ್ಗೆ ವಾಟ್ಸ್ ಅಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಆದರೆ, ಆತ ಮೊಬೈಲ್ಅನ್ನು ಮನೆಯಲ್ಲೇ ಬಿಟ್ಟು ತರಗತಿಗೆ ಬಂದಿದ್ದರಿಂದ ಆತನ ಪೋಷಕರು ಸಂದೇಶಗಳನ್ನು ವೀಕ್ಷಿಸಿದ್ದರು.
ಪೋಷಕರು ಈ ಕುರಿತು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದ್ದರಿಂದ ತರಗತಿ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಪ್ರತಿದಿನ ಸೆಕ್ಯುರಿಟಿ ಗಾರ್ಡ್ ಮೂಲಕ ತಪಾಸಣೆ ಮಾಡಿಸಿ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡಲಾಗುತ್ತಿತ್ತು. ಆದರೂ ಮಂಗಳವಾರ ಮೂರು ಮೊಬೈಲ್ಗಳು ಪತ್ತೆಯಾಗಿದ್ದವು.