ಕಾಲೇಜಿನ ಕೊನೆ ದಿನ ವಿದ್ಯಾರ್ಥಿಗಳು ಮಾಡಿದರು ತರ್ಲೆ ಕೆಲಸ
ಬೆಂಗಳೂರು, ಜೂನ್ 16: ಕಾಲೇಜಿನ ಅಂತಿಮ ದಿನ ವಿದ್ಯಾರ್ಥಿಗಳು ಏನು ಮಾಡಬಹುದು. ಗೆಳೆಯರಿಗೆ, ಶಿಕ್ಷಕರಿಗೆ ಭಾವಪೂರ್ಣ ವಿದಾಯ ಸಲ್ಲಿಸುವುದು ಸಾಮಾನ್ಯ ಆದರೆ ನಗರದ ಈ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವುದೇ ಬೇರೆ.
ಯಲ್ಲಮ್ಮ ದಾಸಪ್ಪ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂಜಿನಿಯರಿಂಗ ಮುಗಿದ ಖುಷಿಗೆ ಕಾಲೇಜಿನ ಪ್ರವೇಶ ದ್ವಾರಕ್ಕೆ ಸಾಮೂಹಿಕವಾಗಿ ಈಡುಗಾಯಿ ಒಡೆದಿದ್ದಾರೆ.
ಕಲಬುರಗಿ: ಇದು ವಿಳಾಸ ಹೇಳುವ ಗೈಡಿಂಗ್ ಹೆಲ್ಮೆಟ್
ಹೌದು, ಕಾಲೇಜು ಪ್ರವೇಶ ದ್ವಾರದ ಮುಂದಿನ ಮೆಟ್ಟಿನ ಮೇಲೆ ಕರ್ಪೂರಗಳನ್ನು ಇಟ್ಟು ಬೆಳಗಿ, ವಿದ್ಯಾರ್ಥಿಗಳು ಈಡುಗಾಯಿ ಹೊಡೆದು, ಬೂದುಗುಂಬಳಕಾಯಿ ಹೊಡೆದು ಗೋವಿಂದಾ.. ಗೋವಿಂದಾ.. ಎಂದು ಉದ್ಘೋಷಗಳನ್ನು ಕೂಗಿದ್ದಾರೆ.
ಐದು ವರ್ಷ ಎಂಜಿನಿಯರಿಂಗ್ ಅನ್ನು ಅಂತೂ ಇಂತೂ ಮುಗಿಸಿ ಕಾಲೇಜು ಜಂಜಾಟದಿಂದ ದೂರವಾದ ಖುಷಿಗೆ ಈ ವಿದ್ಯಾರ್ಥಿಗಳು ಹೀಗೆ ಮಾಡಿದ್ದಾರೆ. ಅಂತೂ ಇಂತೂ ಕೊನೆಗೂ ಎಂಜಿನಿಯರಿಂಗ್ ಮುಗಿಸಿದೆವೆಂಬ ಖುಷಿಗೆ ಗೋವಿಂದ ಆಮ ಸ್ಮರಣೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ತರಲೆ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್ಬುಕ್, ಟ್ವಿಟ್ಟರ್ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ.