ಬೆಂಗಳೂರಲ್ಲಿ ಪುಟ್ ಪಾತ್ ಅತಿಕ್ರಮಣ ಮಾಡುವಂತಿಲ್ಲ
ಬೆಂಗಳೂರು, ಜು. 24 : ಬೆಂಗಳೂರು ಮಹಾನಗರದಲ್ಲಿ ಅತಿಕ್ರಮಣವಾಗಿರುವ ಪಾದಚಾರಿ ಮಾರ್ಗಗಳನ್ನು ಮೂರು ತಿಂಗಳಲ್ಲಿ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅವೈಜ್ಞಾನಿಕ ಹಾಗೂ ಸುಸ್ಥತಿಯಲ್ಲಿರದ ಪಾದಚಾರಿ ಮಾರ್ಗಗಳನ್ನು ಆರು ತಿಂಗಳಲ್ಲಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿದೆ.
ಬುಧವಾರ
ಜೆನ್ನಿಫರ್
ಪಿಂಟೋ
ಎಂಬುವವರು
ಸಲ್ಲಿಸಿದ್ದ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯ
ವಿಚಾರಣೆ
ನಡೆಸಿದ
ಮುಖ್ಯ
ನ್ಯಾಯಮೂರ್ತಿ
ಡಿ.ಎಚ್.ವಘೇಲಾ
ಹಾಗೂ
ನ್ಯಾಯಮೂರ್ತಿ
ಎಚ್.ಜಿ.ರಮೇಶ್
ಅವರಿದ್ದ
ವಿಭಾಗೀಯ
ಪೀಠ,
ಹಲವಾರು
ನಿರ್ದೇಶನಗಳನ್ನು
ನೀಡಿದ್ದು,
ಅವುಗಳನ್ನು
ಕಟ್ಟುನಿಟ್ಟಾಗಿ
ಜಾರಿಗೊಳಿಸುವಂತೆ
ಬಿಬಿಎಂಪಿ
ಆಯುಕ್ತರಿಗೆ
ಸೂಚಿಸಿದೆ.
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ ಸೆಕ್ಷನ್ 288 ಡಿ ಪ್ರಕಾರ ಬೆಂಗಳೂರು ನಗರದಲ್ಲಿರುವ ಎಲ್ಲ ರೀತಿಯ ಶಾಶ್ವತ ಹಾಗೂ ತಾತ್ಕಾಲಿಕ ಅತಿಕ್ರಮಣವನ್ನು ನೋಟಿಸ್ ನೀಡದೆ ತೆರವುಗೊಳಿಸಬೇಕು. ತೆರವು ಕಾರ್ಯಾಚರಣೆಗೆ ಪೊಲೀಸರು ಸಹಕಾರ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. [ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ?]
ನಗರದಲ್ಲಿರುವ ಅವೈಜ್ಞಾನಿಕ ಹಾಗೂ ದುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ಆರು ತಿಂಗಳಲ್ಲಿ ದುರಸ್ತಿ ಮಾಡಬೇಕು ಎಂದು ಪಾಲಿಕೆಗೆ ಸೂಚನೆ ನೀಡಿರು ಕೋರ್ಟ್, ಪಾದಚಾರಿ ಮಾರ್ಗಗಳ ಸ್ಥಿತಿಯ ಬಗ್ಗೆ ಪಾಲಿಕೆ ಮುಖ್ಯ ಎಂಜಿನಿಯರ್ ನಿಗಾ ವಹಿಸಬೇಕು. ಸೂಕ್ತ ರೀತಿಯಲ್ಲಿ ಅವುಗಳನ್ನು ನಿರ್ವಹಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. [ಜಯನಗರದ ಫುಟ್ಪಾತ್, ರಸ್ತೆ ಯಾರಪ್ಪನ ಮನೆ ಆಸ್ತಿ?]
ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸದ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ತೆರವುಗೊಳಿಸುವ ಕಾರ್ಯಾಚರಣೆಗೆ ಪೊಲೀಸರ ನೆರವು ಪಡೆಯಿರಿ ಎಂದು ಸೂಚನೆ ನೀಡಿತು. ಈ ಹಿಂದೆ ಹಲವು ಬಾರಿ ನಗರದಲ್ಲಿನ ಫುಟ್ ಪಾತ್ ಸ್ಥಿತಿಗತಿಯ ಬಗ್ಗೆ ಕ್ರಮ ಕೈಗೊಳ್ಳದ ಪಾಲಿಕೆಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.