ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ
ಬೆಂಗಳೂರು, ಸೆಪ್ಟೆಂಬರ್ 15: ಹತ್ತನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಭುವನೇಶ್ವರಿನಗರದಲ್ಲಿ ಶುಕ್ರವಾರ ನಡೆದಿದೆ.
ಫೇಸ್ ಬುಕ್ ಲೈವ್ ನಲ್ಲಿ ವಿಷ ಸೇವಿಸಿದ ಹೊಸನಗರ ಯುವಕ
ಸುಶ್ಮಿತಾ(16) ಮೃತ ವಿದ್ಯಾರ್ಥಿನಿ, ಬಸವರಾಜು ಎಂಬುವರ ಪುತ್ರಿಯಾಗಿದ್ದು, ಸುಶ್ಮಿತಾ ತಂದೆ ಹಾಲು ವ್ಯಾಪಾರ ಮಾಡಿ ಜೀವನ ಸಾಗಿಸುವ ಬಡ ಕುಟುಂಬದವರು, ಭುವನೇಶ್ವರಿನಗರದಲ್ಲಿ ವಾಸವಾಗಿದ್ದು ಸುಶ್ಮಿತಾ ಮಾಗಡಿ ರಸ್ತೆಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಆಘಾತಕಾರಿ ವರದಿ: ಕರ್ನಾಟಕದಲ್ಲೇ ಆತ್ಮಹತ್ಯೆ ಹೆಚ್ಚು
ಬೆಳಗ್ಗೆ ಹಾಲು ಮಾರಾಟ ಮಾಡಿ ಸುಮಾರು 10 ಗಂಟೆಗೆ ಮನೆಗೆ ಬಂದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು ಎಂದು ಬಸವರಾಜು ತಿಳಿಸಿದ್ದಾರೆ, ಕೆಪಿ ಅಗ್ರಹಾರ ಪೊಲೀಸರು ಸುಶ್ಮಿತಾ ಆತ್ಮಹತ್ಯೆ ವಿಚಾರವಾಗಿ ಏನಾದರೂ ಸಾಕ್ಷಿಗಳು ದೊರೆಯಬಹುದು ಎಂದು ಆಕೆಯ ಕೋಣೆ, ಸ್ಕೂಲ್ ಬ್ಯಾಗ್ ಎಲ್ಲವನ್ನು ಶೋಧಿಸಿದರೂ ಯಾವುದೇ ಕುರುಹು ದೊರೆತಿಲ್ಲ, ಡೆತ್ ನೋಟ್ ಕೂಡ ಇರಲಿಲ್ಲ ಹಾಗಾಗಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.