ಪೊಲೀಸ್ ಪರೀಕ್ಷೆ ಪತ್ರಿಕೆ ಸೋರಿಕೆ, ನಾಲ್ವರ ಬಂಧನ
ಬೆಂಗಳೂರು, ಜುಲೈ 17: ಕರ್ನಾಟಕ ರಾಜ್ಯಾದ್ಯಾಂತ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಹೊಂದಿರುವುದಾಗಿ ಪರೀಕ್ಷಾರ್ಥಿಗಳನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆಯಲು ಯತ್ನಿಸಿದ್ದ 4 ಜನರನ್ನು ಬೆಂಗಳೂರು ನಗರ ಸಿಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ.
1)
ವಿನಯಗೌಡ
28ವರ್ಷ,
ಶಿರಾ
ತಾಲ್ಲೋಕ್,
ತುಮಕೂರು
ಜಿಲ್ಲೆ-
ಪಾರ್ಟ್
ಟೈಂ
ಟ್ಯೂಷನ್
ಮಾಸ್ಟರ್
2)
ನರೇಂದ್ರ
ಬಾಬು.
ಟಿ.ಎಲ್.
31ವರ್ಷ,
ಕೊರಟಗೆರೆ
ತಾಲ್ಲೋಕ್,
ತುಮಕೂರು
ಎನ್.ಜಿ.ಒ.ನಲ್ಲಿ
ಕೆಲಸ
3)
ಮಂಜುಗೌಡ
29
ವರ್ಷ,
ಹುಣಸೂರು
ತಾಲ್ಲೋಕ್,
ಮೈಸೂರು
ಜಿಲ್ಲೆಎನ್.ಜಿ.ಒ..ನಲ್ಲಿ
ಕೆಲಸ
4)
ಗುರುಮೂರ್ತಿ.
ಎನ್
ಬಿನ್
ನರಸಿಂಹಯ್ಯ-46ವರ್ಷ,
ಹಾಸನ
ಜಿಲ್ಲೆ.
ಡಿ.ಎ.ಆರ್.ನಲ್ಲಿ
ಮುಖ್ಯಪೇದೆ.
ಇವರುಗಳ
ವಿಚಾರಣೆಯಿಂದ
ತಿಳಿದುಬಂದಿರುವುದೇನಂದರೆ
ಈ
ಆರೋಪಿಗಳು
ಸುಮಾರು
ಒಂದು
ತಿಂಗಳಿನಿಂದ
ಸಿವಿಲ್
ಪೊಲೀಸ್
ಕಾನ್ಸ್
ಟೇಬಲ್ಸ್
ಹುದ್ದೆಯ
ಆಕಾಂಕ್ಷಿಗಳಾಗಿರುವ
ಕೆಲವು
ಪರೀಕ್ಷಾರ್ಥಿಗಳನ್ನು
ಸಂಪರ್ಕಿಸಿ
ಅವರುಗಳಿಗೆ
ಪರೀಕ್ಷೆಗೆ
ಮುಂಚಿತವಾಗಿ
ಪ್ರಶ್ನೆ
ಪತ್ರಿಕೆಯನ್ನು
ಸರಬರಾಜು
ಮಾಡುವುದಾಗಿ
ನಂಬಿಸಿ
ಪ್ರತಿ
ಅಭ್ಯರ್ಥಿಯಿಂದ
ತಲಾ
3,00,000/-
ಗಳಷ್ಟು
ಹಣ
ಪಡೆದು
ತಲೆಮರೆಸಿಕೊಳ್ಳುವ
ಹುನ್ನಾರದಲ್ಲಿದ್ದರೆಂದು
ತಿಳಿದು
ಬಂದಿರುತ್ತದೆ.
ಈ ಸಂಚಿನ ಭಾಗವಾಗಿ ಆರೋಪಿ ವಿನನ್ ಗೌಡ, ಈತನು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಇತರೆ ಆರೋಪಿತರ ಸಹಾಯದಿಂದ ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿದ್ದಾರೆ.
ಅವರಿಗೆ ತಮ್ಮ ಬಳಿ ದಿನಾಂಕ.17/07/2016 ರಂದು ನಿಗದಿಯಾಗಿರುವ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರುವುದಾಗಿ ನಂಬಿಸಿ ಅಭ್ಯರ್ಥಿಗಳಿಗೆ ವಂಚಿಸುವ ಪ್ರಯತ್ನದಲ್ಲಿರುವ ಖಚಿತ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ.
ಸಕಾಲದಲ್ಲಿ ಸದರಿ ಕೊಠಡಿಯ ಮೇಲೆ ದಾಳಿ ನಡೆಸಿ ಆರೋಪಿತ ವಿನಯ್ ಗೌಡನನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ ಈ ವಂಚಕರ ಬಳಿ ಯಾವುದೇ ಪ್ರಶ್ನೆ ಪತ್ರಿಕೆ ಇಲ್ಲದೆ ಇದ್ದರೂ ಮುಗ್ದ ಪರೀಕ್ಷಾರ್ಥಿಗಳನ್ನು ನಂಬಿಸಿ ಅವರಿಂದ ಮುಂಗಡ ಹಣ ಪಡೆದು ಪರಾರಿಯಾಗಿ ವಂಚಿಸುವ ಹುನ್ನಾರ ಮಾಡಿರುವುದು ಬೆಳಕಿಗೆ ಬಂದಿರುತ್ತದೆ.
ಈ ಆರೋಪಿತರುಗಳಿಂದ 6 ಮೊಬೈಲ್ ಪೋನ್ ಗಳು, 2,500/-ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ದ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೊಂದಣಿಯಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರು (ಅಪರಾಧ).ಕೆ.ವಿ.ಶರತ್ ಚಂದ್ರ ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಹೆಚ್.ಡಿ.ಆನಂದ್ ಕುಮಾರ್ ರವರ ನೇತೃತ್ವದಲ್ಲಿ ಸಿ.ಸಿ.ಬಿ ಎ.ಸಿ.ಪಿ.ಗಳಾದ ವಿ.ಜೆ.ಸಜೀತ್, ಡಾ:ಹೆಚ್.ಎನ್.ವೆಂಕಟೇಶ್ ಪ್ರಸನ್ನ, ಜಯಮಾರುತಿ, ಇನ್ಸ್ ಪೆಕ್ಟರ್ .ಎಸ್.ಆರ್.ವೀರೇಂದ್ರಪ್ರಸಾದ್, ರಮೇಶ್ ರಾವ್, ಆನಂದ ಕಬ್ಬೂರಿ, ಭಾನುಪ್ರಸಾದ್, ಮತ್ತು ಸಿಬ್ಬಂದಿಗಳ ತಂಡ ನಡೆಸಿರುತ್ತಾರೆ.