ಬೆಂಗಳೂರು: ವಿದ್ಯಾರಣ್ಯಪುರದಲ್ಲಿ 2 ಕಡೆ ಸರಗಳ್ಳತನ
ಬೆಂಗಳೂರು, ಸೆಪ್ಟೆಂಬರ್. 16: ಬೆಂಗಳೂರಲ್ಲಿ ಗಣೇಶ ಹಬ್ಬದ ಎದುರು ಮತ್ತೆ ಸರಗಳ್ಳರ ಹಾವಳಿ ಕಾಣಿಸಿಕೊಂಡಿದೆ. ಬುಧವಾರ ಮಧ್ಯಾಹ್ನ ಕಳ್ಳರು ಕೈಚಳ ತೋರಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಸರ ಅಪಹರಣ ಮಾಡಲಾಗಿದೆ. ಬಾಲಾಜಿ ಲೇಔಟ್ ನಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದೆ.
ಶರಾವತಿ ಎಂಬುವರ 40 ಗ್ರಾಂ ಮತ್ತು ತಾರಾಬಾಯಿ ಎಂಬುವರ 70 ಗ್ರಾಂ ಸರವನ್ನು ಅಪಹರಿಸಲಾಗಿದೆ. ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. [ಬೆಂಗಳೂರು: 2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ]
ಸರಗಳ್ಳರನ್ನು ಹಿಡಿಯಲು ಬೆಂಗಳೂರು ಪೊಲೀಸರು ವಿಶೇಷ ತಂಡ ರಚನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಮುಂದಾಳತ್ವದಲ್ಲಿ ತಂಡವೊಂದನ್ನು ರಚನೆ ಮಾಡಿದ್ದರೂ ಅಪರಾಧ ಪ್ರಕರಣಗಳಿಗೆ ಅಂಕುಶ ಬಿದ್ದಿಲ್ಲ.
Tweet
by
Deputy
Commissioner
of
Police
-
Command
Center,
Bengaluru
City.
Shri.
M
G
Nagendra
Kumar,
KSPS...
http://t.co/fPBl9Us3ZG
—
BengaluruCityPolice
(@BlrCityPolice)
September
16,
2015
ಸೆಪ್ಟೆಂಬರ್ 9 ಮತ್ತು 10 ರಂದು ನಗರದ ವಿವಿಧೆಡೆ ಕೈಚಳಕ ತೋರಿಸಿದ್ದ ಕಳ್ಳರು ಎರಡೇ ದಿನದಲ್ಲಿ 10 ಕಡೆ ಸರಗಳ್ಳತನ ಮಾಡಿದ್ದರು. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ, ಬ್ಯಾನರ್ ಗಳ ಮೂಲಕವೂ ಸಹ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಅಲ್ಲದೇ ಕಳ್ಳತನ ತಡೆಯಲು ವಿಶೇಷ ತಂಡವನ್ನು ರಚನೆ ಮಾಡಿದೆ.