ಬೆಂಗಳೂರಲ್ಲಿ ಸರಗಳ್ಳತನ : ಪೊಲೀಸರ ಕಿವಿ ಹಿಂಡಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 08 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರೆ ಕೇವಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾತ್ರವಲ್ಲ, ಆಯಾ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೂ ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ
ಹೆಚ್ಚುತ್ತಿರುವ
ಸರಗಳ್ಳತನ
ಪ್ರಕರಣ,
ನಗರದಲ್ಲಿ
ನಡೆದ
ಬಿಪಿಒ
ಉದ್ಯೋಗಿಯ
ಮೇಲಿನ
ಅತ್ಯಾಚಾರ
ಪ್ರಕರಣವನ್ನು
ಗಂಭೀರವಾಗಿ
ಪರಿಗಣಿಸಿರುವ
ಸಿದ್ದರಾಮಯ್ಯ
ಅವರು
ಗೃಹ
ಕಚೇರಿ
ಕೃಷ್ಣಾದಲ್ಲಿ
ಬುಧವಾರ
ಸಚಿವರು
ಹಾಗೂ
ಪೊಲೀಸ್
ಅಧಿಕಾರಿಗಳ
ಸಭೆ
ನಡೆಸಿದರು.
[ಬೆಂಗಳೂರು
:
ಮತ್ತೆ
ಬಂದ
ಸರಗಳ್ಳರು,
8
ಕಡೆ
ಕೈಚಳಕ]
ಬಿಪಿಒ ಉದ್ಯೋಗಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸಿದ್ದರಾಮಯ್ಯ ಅವರು, ನಗರದಲ್ಲಿನ ಸರಗಳ್ಳತನದ ಪ್ರಕರಣಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಅಪರಾಧಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. [ಬೆಂಗಳೂರಲ್ಲಿ ಸಿಕ್ಕಿಬಿದ್ರು 6 ಸರಗಳ್ಳರು]
ಬಿಪಿಒ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಆಯಾ ಕಂಪನಿಗಳ ಮಾಲೀಕರೂ ನಿಗಾ ವಹಿಸಬೇಕು. ಅದು ಅವರ ಜವಾಬ್ದಾರಿಯೂ ಹೌದು. ಕೆಲಸದ ನಿಮಿತ್ತ ರಾತ್ರಿ ವೇಳೆ ಸಂಚರಿಸುವ ಮಹಿಳಾ ಉದ್ಯೋಗಿಗಳಿಗೆ ಸೂಕ್ತ ರಕ್ಷಣೆಯನ್ನು ಆಯಾ ಮಾಲೀಕರು ಒದಗಿಸುವತ್ತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. [2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ]
ಹೊಯ್ಸಳ ಗಸ್ತು ವಾಹನಗಳು ಠಾಣೆಯಲ್ಲಿಯೇ ಇರಬಾರದು. ಅವು ರಸ್ತೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಗಸ್ತು ತಿರುಗುತ್ತಿರಬೇಕು. ಇದರಿಂದ ಸಾರ್ವಜನಿಕರು ಪೊಲೀಸರನ್ನು ತಕ್ಷಣವೇ ಸಂಪರ್ಕಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗೃಹ ಸಚಿವ ಕೆಜೆ ಜಾರ್ಜ್, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.