ತ್ಯಾಜ್ಯ ಸಂಬಂಧಿ ದೂರು ಆಲಿಸಲು ಬಿಬಿಎಂಪಿ ಸಹಾಯವಾಣಿ ಸಿದ್ಧವಾಗಿಲ್ಲ
ಬೆಂಗಳೂರು, ಮೇ 21: ವಲಯಗಳಲ್ಲಿ ದಾಖಲಾಗುವ ದೂರುಗಳು ಕೇಂದ್ರ ಕಚೇರಿ ಗಮನಕ್ಕೆ ಬಾರದೆ ಅವುಗಳಲ್ಲಿ ಬಹುತೇಕ ನಿವಾರಣೆಯಾಗುತ್ತಿಲ್ಲ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಒಂದೇ ಸಹಾಯವಾಣಿಯನ್ನು ಮಾಡಲು ಬಿಬಿಎಂಪಿ ಆಲೋಚಿಸಿತ್ತು.
ಬೆಂಗಳೂರು ನಾಗರಿಕರ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವ ಮತ್ತು ತ್ಯಾಜ್ಯ ವಿಲೇವಾರಿಯನ್ನು ಸಮಪರ್ಕಕಗೊಗೊಳಿಸುವ ಸಲುವಾಗಿ ಬಿಬಿಎಂಪಿ 8 ವಲಯಗಳಲ್ಲಿದ್ದ ಪ್ರತ್ಯೇಕ ಸಹಾಯವಾಣಿಗಳನ್ನು ಒಂದೇ ಸೂರಿನಡಿ ತಡುವ ಯೋಜನೆಗೆ ಗ್ರಹಣ ಹಿಡಿದಿದೆ.
ಬಜೆಟ್ಗೆ ಅನುಮೋದನೆಯಿಲ್ಲದೆ ಅನುಷ್ಠಾನವಾಗದ ಯೋಜನೆಗಳು
ಎರಡೂವರೆ ವರ್ಷಗಳ ಹಿಂದೆಯೇ ಆರಂಭವಾದ ಸಹಾಯವಾಣಿ ಕೇಂದ್ರ ಸ್ಥಾಪನೆ ಕಾರ್ಯ ಈವರೆಗೂ ಪೂರ್ಣಗೊಂಡಿಲ್ಲ. ಬಿಬಿಎಂಪಿಯಲ್ಲಿ ಕೇಂದ್ರ ಕಚೇರಿ ಹಾಗೂ 8 ವಲಯ ಕಚೇರಿಗಳು ಸೇರಿ ಒಟ್ಟು 9 ಸಹಾಯವಾಣಿ ಕೇಂದ್ರಗಳಿವೆ.
ಬೇರೆ ಇಲಾಖೆ ದೂರುಗಳು ಸ್ವೀಕಾರ: ರಸ್ತೆ, ಗುಂಡಿ, ಮರ ಕಡಿಯುವುದು, ಮನೆಗಳಿಗೆ ಮಳೆ ನೀರು ಹರಿದಿರುವುದು ಸೇರಿ ಮತ್ತಿತರ ದೂರುಗಳನ್ನು ಸಹಾಯವಾಣಿ ಕೇಂದ್ರದಲ್ಲಿ ದಾಖಲಿಸುವ ವ್ಯವಸ್ಥೆಯಿದೆ. ಅದೇ ರೀತಿ ನೂತನ ಸಹಾಯವಾಣಿ ಕೇಂದ್ರದಲ್ಲಿ ಬೆಸ್ಕಾ
ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ನೇಮಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಆ ವಾಹನಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದನ್ನು ಜಿಪಿಎಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ.