ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ
ಬೆಂಗಳೂರು, ಮೇ 15 : ಬೆಂಗಳೂರು ಪೊಲೀಸರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ರಾತ್ರಿ ಗಸ್ತು ತಿರುಗುವ ಸಿಬ್ಬಂದಿ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಹೊಯ್ಸಳ ಜೀಪುಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಪ್ರಾಯೋಗಿಕವಾಗಿ
ಈ
ಯೋಜನೆ
ಆಗ್ನೇಯ
ವಿಭಾಗದಲ್ಲಿ
ಜಾರಿಗೆ
ಬಂದಿದೆ.
ವಿಭಾಗದ
ವ್ಯಾಪ್ತಿಯ
ಒಟ್ಟು
13
ಪೊಲೀಸ್
ಠಾಣೆಗಳಲ್ಲಿರುವ
15
ಹೊಯ್ಸಳ
ಜೀಪುಗಳಿಗೆ
ಸಿಸಿಟಿವಿಯನ್ನು
ಆಳವಡಿಸಲಾಗಿದೆ.
ಹಿರಿಯ
ಅಧಿಕಾರಿಗಳು
ಇದನ್ನು
ನಿರ್ವಹಣೆ
ಮಾಡಲಿದ್ದು,
ತಮ್ಮ
ಫೋನ್
ಮೂಲಕ
ಅವರು
ಸೆರೆಯಾಗಿರುವ
ದೃಶ್ಯವನ್ನು
ನೇರವಾಗಿ
ವೀಕ್ಷಿಸಬಹುದಾಗಿದೆ.
[ಗುಪ್ತಚರ
ಇಲಾಖೆಗೆ
ಶೀಘ್ರ
ಎಸ್
ಐಗಳ
ನೇಮಕ]
ಆಗ್ನೇಯ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪೆಟ್ ಅವರು ಈ ಯೋಜನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗಸ್ತು ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದವು. ಗುಂಪು ಘರ್ಷಣೆ ಸಮಯದಲ್ಲಿಯೂ ಅಲ್ಲಿನ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]
14 ಸಾವಿರ ಖರ್ಚು : ಜೀಪುಗಳಿಗೆ ಅಳವಡಿಸಿರುವ ಕ್ಯಾಮರಾಗಳ ಬೆಲೆ 14 ಸಾವಿರ ರೂ. 12 ಗಂಟೆಗೊಮ್ಮೆ ಈ ಜೀಪುಗಳು ಪೊಲೀಸ್ ಠಾಣೆಗೆ ಆಗಮಿಸಲಿದ್ದು, ಆಗ ಅದರಲ್ಲಿರುವ ದೃಶ್ಯಗಳನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳು ಸ್ಮಾರ್ಟ್ ಫೋನ್ ಮೂಲಕ ನೇರವಾಗಿ ಸೆರೆಯಾಗಿರುವ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆಗ್ನೇಯ ವಿಭಾಗದಲ್ಲಿ ಜಾರಿಗೆ ತರಲಾಗಿದೆ. ಯೋಜನೆ ಫಲಪ್ರದವೆನಿಸಿದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಸಂಚರಿಸುವ ಹೊಯ್ಸಳ ಗಸ್ತು ವಾಹನಗಳಿಗೆ ಇದನ್ನು ಆಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ.