ಬೆಂಗಳೂರು: ಜೂಜು ಅಡ್ಡೆ ಮೇಲೆ ದಾಳಿ 16.43 ಲಕ್ಷ ನಗದು ವಶ
ಬೆಂಗಳೂರು, ಡಿಸೆಂಬರ್ 07: ನಗರದ ಸಿಸಿಬಿ ಪೊಲೀಸರು ಭರ್ಜರಿ ಭೇಟೆ ನಡೆಸಿದ್ದಾರೆ. ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 16.43 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಆಂಬಿಡೆಂಟ್ ಕಂಪಿನಿಯಿಂದ ಪಡೆದ ಹಣ ವಾಪಸ್ ನೀಡುವಂತೆ ನೋಟಿಸ್
ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಗೇರಿ ಹೋಬಳಿ, ಹಮ್ಮಿಗೆರೆ ಗ್ರಾಮದ ಮನೆ ನಂ 210 ರಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆಯೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
500 ಕೋಟಿ ಆಸ್ತಿ ಒಡೆಯ ರೌಡಿ ಶೀಟರ್ ಮಿರ್ಲೆ ವರದರಾಜನ ಪೂರ್ಣ ಮಾಹಿತಿ
ದಾಳಿ ಸಮಯ 11.05 ಲಕ್ಷ ನಗದು, ಒಂದು ಮೊಬೈಲ್ ಹಾಗೂ ಹಮ್ಮಿಗೆರೆ ಗ್ರಾಮದ ಎಚ್.ಆರ್.ಮಂಜುನಾಥ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಬೆಟ್ಟಿಂಗ್ ಮಾಹಿತಿ ಪುಸ್ತಕ ಮತ್ತು ಆಪಲ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಎಸಿಪಿ ವೆಂಕಟೇಶ್ ಪ್ರಸನ್ನಗೆ ಜೀವ ಬೆದರಿಕೆ: ಆಂಬಿಡೆಂಟ್ ಕೇಸ್ ಎಫೆಕ್ಟ್
ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ದಾಳಿ ನಡೆಸಿದ ಸ್ಥಳದಲ್ಲಿ 5.38 ಲಕ್ಷ ಹಣ ಮತ್ತು ಎರಡು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.