ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇಲ್ಲ : ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 14 : 'ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಡುವುದರ ಜೊತೆಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಗೆ ಮುಂದಿನ ವರ್ಷದ ಜೂನ್ವರೆಗೆ ಕುಡಿಯುವ ನೀರು ಒದಗಿಸುವುದಾಗಿ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ
ತುರ್ತು
ಮಂತ್ರಿ
ಪರಿಷತ್
ಸಭೆಯ
ಬಳಿಕ
ಮಾತನಾಡಿದ
ಅವರು,
'ಸುಪ್ರೀಂಕೋರ್ಟ್
ನೀಡಿರುವ
ನಿರ್ದೇಶನದಂತೆ
ತಮಿಳುನಾಡಿಗೆ
ನೀರು
ಬಿಡುಗಡೆ
ಮಾಡಲಾಗುವುದು.
ಸೋಮವಾರದ
ಆದೇಶದಿಂದ
ರಾಜ್ಯದ
ಕಾವೇರಿ
ಕಣಿವೆಯಿಂದ
ತಮಿಳುನಾಡಿಗೆ
18,000
ಕ್ಯೂಸೆಕ್ಸ್
ನೀರನ್ನು
ಹೆಚ್ಚುವರಿಯಾಗಿ
ಬಿಡುಗಡೆ
ಮಾಡುವ
ಅನಿವಾರ್ಯತೆ
ಎದುರಾಗಿದೆ'
ಎಂದರು.[ಕಾವೇರಿ
ಕಿಚ್ಚು
:
ಸಿದ್ದರಾಮಯ್ಯ
ಪತ್ರಿಕಾಗೋಷ್ಠಿ
ವಿವರ]
'ರಾಜ್ಯದ ಕಾವೇರಿ ಕಣಿವೆಯ ರೈತರಿಗೆ ನೀರಾವರಿ ಸಮನ್ವಯ ಸಮಿತಿಯಲ್ಲಿ ಈಗಾಗಲೇ ನೀಡಿರುವ ಭರವಸೆಯಂತೆ ಕೃಷಿ ಬೆಳೆಗಳಿಗೂ ನೀರು ಒದಗಿಸಲಾಗುವುದು. ಕೆಲವು ಸಂಘಟನೆಗಳು ನ್ಯಾಯಾಂಗದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ತಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ' ಎಂದರು.[ಕುಡಿಯೋಕೆ ಕಾವೇರಿ ನೀರು ಸಿಗಲ್ಲ]
'ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು 1991 ರಲ್ಲಿ ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ತಿರಸ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಅದು ನ್ಯಾಯಾಲಯದ ಆದೇಶವಲ್ಲ. ಇದೀಗ ನ್ಯಾಯಾಧಿಕರಣ ಅಂತಿಮ ಐ-ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ' ಎಂದು ಹೇಳಿದರು.