ಗಾಯಕ ಫಣಿರಾಜರಿಂದ ಶಾಸ್ತ್ರೀಯ ಸಂಗೀತ ಸಂಜೆ
ಬೆಂಗಳೂರು, ಮಾರ್ಚ್ 29: ಯುವ ಗಾಯಕ ಫಣಿರಾಜ ಶಿವಶಂಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ 'ವಸಂತ ವೈಭವ' ಮಾರ್ಚ್ 31ರಂದು ಇಂದಿರಾನಗರದ ಪುರಂದರ ಭವನದಲ್ಲಿ ನಡೆಯಲಿದೆ.
ಫಣಿರಾಜ್ ಅವರು ಪುದುಕೊಟ್ಟೈ ಆರ್. ಕೃಷ್ಣಮೂರ್ತಿ, ವಿದುಷಿ ಎಂಎಸ್ ವಿದ್ಯಾ ಹಾಗೂ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಯವರ ಶಿಷ್ಯರಾಗಿದ್ದು, ಅವರು ವೈಟ್ ಫೀಲ್ಡ್ ಪ್ರಾಜೆಕ್ಟ್ ಮ್ಯೂಸಿಕಲ್ ಅಕಾಡೆಮಿಯಲ್ಲಿರುವ ಕಾರ್ನಾಟಿಕ್ ಕ್ಲಾಸಿಕಲ್ ಮ್ಯೂಸಿಕ್ನಲ್ಲಿ ಡೀನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ವೀಣೆಯ ಸುಮಧುರ ನಾದದ ಹಿಂದಿದೆ ನೂರಾರು ದಲಿತರ ಬೆವರು..!
ಸಂಗೀತ-ಪಣಿರಾಜ್, ವಯೋಲಿನ್-ಅಚ್ಯುತರಾವ್, ಕವಿತಾ ನಾರಾಯಣ್, ಕೊಳಲು-ಆನಂದ್ ಗೋಪಿನಾಥ್, ಕೀಬೋರ್ಡ್ ಹಂಸೆಲ್ ಸಲೀಮ್, ತಂಬುರ- ಹುಲಿಕಲ್ ಪ್ರಸಾದ್, ವಯೋಲಿನ, ಮೃದಂಗ-ಲಕ್ಷ್ಮೀನಾರಾಯಣ, ತಬಲ-ಪಂಕಜ್ ಮುಂಜೆ, ಘಟಂ- ಸಚಿನ್ ದೇವಿಪ್ರಸಾದ್, ಶ್ರೀನಿವಾಸ್ ರಾಮಚಂದ್ರನ್ ಮೃದಂಗದೊಂದಿಗೆ ಸಾಥ್ ನೀಡಲಿದ್ದಾರೆ.
ಅನನ್ಯ ದೇಶಪಾಂಡೆ, ಆರ್. ದೀಪಾ, ದಿವ್ಯಾ ಪಂಕಜ್, ದುರ್ಗಾ ಗಿರೀಶ್, ಎಚ್.ಎಂ. ಲಕ್ಷ್ಮೀ, ರೋಜಾ ಕೊಂಪಳ್ಳಿ, ವಿದ್ಯಾ ದೇಶಪಾಂಡೆ, ಎಂ.ಎಚ್. ಸುಂದರ್, ವಿಜಯಾ ರಾಮನಾಥನ್ ಅವರಿಂದ ಸಮೂಹ ಗಾಯನ ನಡೆಯಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೈಟ್ ಫೀಲ್ಡ್ ಪ್ರಾಜೆಕ್ಟ್ ಪ್ರಸಿದ್ಧ ಸಂಗೀತ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಅಕಾಡೆಮಿಯಿಂದ ಸಾಕಷ್ಟು ಮಂದಿಗೆ ಸಂಗೀತದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಈ ಪ್ರಾಜೆಕ್ಟ್ ನಲ್ಲಿ ಕ್ಲಾಸಿಕಲ್, ಸೆಮಿ ಕ್ಲಾಸಿಕಲ್, ಕಂಟೆಂಪರರಿ ಸಂಗೀತದ ಕುರಿತು ಹೇಳಿಕೊಡಲಾಗುತ್ತದೆ. ಅಂದು ಸಂಜೆ 6ಗಂಟೆಗೆ ಗಾಯನ ಕಾರ್ಯಕ್ರಮ ಜರುಗಳಿದೆ.