ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.22ರಂದು ರಮಾಕಾಂತ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

By Nayana
|
Google Oneindia Kannada News

ಬೆಂಗಳೂರು, ಜು.18: ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಜು.22ರಂದು ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನಡೆಯಲಿದೆ.

ವಿದ್ವಾನ್‌ ರುದ್ರಪಟ್ನಂ ಎಸ್‌ ರಮಾಕಾಂತ್‌ ಅವರಿಂದ ಸಂಗೀತ ಕಾರ್ಯಕ್ರಮ ಮೂಡಿಬರಲಿದ್ದು, ವಯೋಲಿನ್‌ನಲ್ಲಿ ವಿದ್ವಾನ್‌ ಮೈಸೂರು ಶ್ರೀಕಾಂತ್‌, ಮೃದಂಗದಲ್ಲಿ ವಿದ್ವಾನ್‌ ಎವಿ ಆನಂದ್‌, ಖಂಚಿರದಲ್ಲಿ ವಿದ್ವಾನ್‌ ಎನ್‌ ಅಮೃತ್‌ ಸಾಥ್‌ ನೀಡಲಿದ್ದಾರೆ.

ಕಾರ್ಯಕ್ರಮವು ಜು.22ರಂದು ಸಂಜೆ 5.30ಕ್ಕೆ ಆರಂಭಗೊಳ್ಳಲಿದ್ದು, ಬನಶಂಕರಿ ಎರಡನೇ ಹಂತದಲ್ಲಿರುವ ಸಿದ್ದಣ್ಣ ಲೇಔಟ್‌ನ ರಾಮ ಲಲಿತ ಕಲಾ ಮಂದಿರದಲ್ಲಿ ನಡೆಯಲಿದೆ.

Carnatic classical concert at shriram lalitha kala mandir

ಸಂಗೀತ ಪ್ರಿಯರಿಗಿದು ಸದವಕಾಶವಾಗಿದೆ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೇಳದವರಿಲ್ಲ, ಇಷ್ಟಪಡದವರಿಲ್ಲ, ದೇವರ ಮೇಲಿನ ಹಾಡುಗಳು, ಭಾವಗೀತೆಗಳಂತೂ ಕೇಳುತ್ತಲೇ ಇರಬೇಕೆನ್ನುವಷ್ಟು ಆಸಕ್ತಿ ಮೂಡಿಸುತ್ತದೆ.

English summary
Banashankari shri Rama lalitha kala mandir is organising Carnatic classical vocal concert by rudrapatanam s ramakanth on July 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X