ಸ್ಪಾ ಬೇಡ ಮಂಚಕ್ಕೆ ಬಾ ಎಂದು ಕರೆದ ಉದ್ಯಮಿ ಜೈಲಿಗೆ
ಬೆಂಗಳೂರು, ಫೆಬ್ರವರಿ 23: ಉದ್ಯಮಿ ಸಾಯಿ ರಾಮಕೃಷ್ಣ ಕರುತರಿ ಅವರು ಸ್ಪಾದಲ್ಲಿ ಕೆಲಸ ಮಾಡುವ ಮಹಿಳೆಗೆ ಕಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದಾಶಿವ ನಗರದ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ. ಮಹಿಳೆಯನ್ನು ರಕ್ಷಿಸಲು ತೆರಳಿದ ಪೊಲೀಸರ ಮೇಲೆ ಕೂಡ ಹಲ್ಲೆಗೆ ಯತ್ನಿಸಿರುವ ಘಟನೆ ಸದಾಶಿವ ನಗರದಲ್ಲಿ ನಡೆದಿದೆ.
ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ರೈಡ್
ಪೊಲೀಸರು ಹೇಳುವ ಪ್ರಕಾರ ಸ್ಪಾ ಸಿಬ್ಬಂದಿ ಸಂಜೆ ವೇಳೆಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಉದ್ಯಮಿಯೊಬ್ಬರು ಸ್ಪಾಗೆ ಬಂದು ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಅದನ್ನಾಧರಿಸಿ ಸ್ಪಾ ಬಳಿ ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಉದ್ಯಮಿ ಯತ್ನಿಸಿದ್ದ ಎಂದು ತಿಳಿಸಿದ್ದಾರೆ.
ಮಹಿಳೆಯು ಜನವರಿಯಿಂದ ಆ ಸ್ಪಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸದಾಶಿವನಗರ ನಿವಾಸಿಯಾಗಿರುವ ರಾಮಕೃಷ್ಣ ಸ್ಪಾದ ಪರ್ಮನೆಂಟ್ ಕಸ್ಟಮರ್ ಆಗಿದ್ದರು. ಫೆ.19 ರಂದು ಸಂಜೆ 6 ಗಂಟೆಗೆ ಸ್ಪಾಗೆ ಬಂದಿದ್ದಾನೆ 11,800 ರ ಪ್ಯಾಕೇಜ್ ನೋಂದಣಿ ಮಾಡಿದ್ದಾನೆ. ಅಲ್ಲಿನ ಥೆರಪಿಸ್ಟ್ ರಾಮಕೃಷ್ಣ ಅವರಿಗೆ ಮಸಾಜ್ ಮಾಡುವಂತೆ ಮಹಿಳೆಗೆ ತಿಳಿಸಿದ್ದಾರೆ. ಅದಾದ ನಂತರ ಮಸಾಜ್ ರೂಮಿಗೆ ಬಂದು ಈ ರೀತಿಯ ಮಸಾಜ್ ಗಳು ನನಗೆ ಇಷ್ಟವಿಲ್ಲ ಎಂದು ರೇಗಾಡಿದ್ದಾರೆ. ಯಾಕೆ ಎಂದು ಅವರನ್ನು ಪ್ರಶ್ನೆ ಮಾಡಿದಾಗ ನೇರವಾಗಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಹೇಳಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ರಾಮಕೃಷ್ಣ ಅವರ ಬಳಿ ಇದು ಫ್ಯಾಮಿಲಿ ಸ್ಪಾ ಇಲ್ಲಿ ಅನೈತಿಕ ಚಟುವಟಿಕೆಗೆ ಅವಕಾಶವಿಲ್ಲ, ಇದು ತಪ್ಪು ಎಂದು ಎಷ್ಟೇ ಮನವಿ ಮಾಡಿಕೊಂಡರೂ ಆತ ಮಾತು ಕೇಳಲಿಲ್ಲ. ಒಂದೊಮ್ಮೆ ನೀನು ಒಪ್ಪಿಕೊಳ್ಳದಿದ್ದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೆ ಎಂದು ಪೋಷಕರ ಬಳಿ ಹೇಳುವುದಾಗಿ ಬೆದರಿಕೆ ಕೂಡ ಹಾಕಿದ್ದ.
ಮಹಿಳೆ ತಕ್ಷಣ ಸ್ಪಾದಿಂದ ಹೊರಗಡೆ ಬಂದು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದಾರೆ. ಪಿಂಕ್ ಹೊಯ್ಸಳ ತಕ್ಷಣವೇ ಅಲ್ಲಿಗೆ ಆಗಮಿಸಿದೆ. ಮಹಿಳೆಯ ದೂರನ್ನು ಕೇಳಿ ವಿಚಾರಣೆಗೆ ಮುಂದಾದ ಪಲೀಸರ ಮೇಲೂ ಕೂಡ ಉದ್ಯಮಿ ಹಲ್ಲೆಗೆ ಯತ್ನಿಸಿದ್ದಾನೆ. ಉದ್ಯಮಿ ಮೇಲೆ ಐಪಿಸಿ 354 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.