ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆದರೂ ಸಾಲಮನ್ನಾ ಕುರಿತ ಸಭೆಗೆ ಹೋಗಲಿಲ್ಲ ಯಡಿಯೂರಪ್ಪ

By Manjunatha
|
Google Oneindia Kannada News

Recommended Video

ಎಚ್ ಡಿ ಕೆ ನೇತೃತ್ವದಲ್ಲಿ ನಡೆದ ರೈತರ ಸಾಲ ಮನ್ನಾ ಕುರಿತ ಸಭೆಗೆ ಬಿ ಎಸ್ ವೈ ಗೈರು | Oneindia Kannada

ಬೆಂಗಳೂರು, ಮೇ 30: ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಮಹತ್ವದ ಸಭೆಗೆ ವಿರೋಧಪಕ್ಷ ನಾಯಕ ಯಡಿಯೂರಪ್ಪ ಅವರಿಗೆ ಆಹ್ವಾನ ಇದ್ದರೂ ಸಹಿತ ಅವರು ಗೈರಾದರು.

ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಮಂಗಳೂರು ಪ್ರವಾಸಕ್ಕೆ ತೆರಳುತ್ತಿರುವ ಕಾರಣ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಸಭೆಗೆ ಕಳುಹಿಸಲಾಗಿತ್ತು ಆದರೆ ಯಡಿಯೂರಪ್ಪ ಅವರು ಮಧ್ಯಾಹ್ನ 3 ಗಂಟೆ ವರೆಗೂ ಬೆಂಗಳೂರಲ್ಲೇ ಇದ್ದರು.

ರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರಿನಲ್ಲೇ ಇದ್ದರೂ ಸಹಿತ ಯಡಿಯೂರಪ್ಪ ಅವರು ರೈತ ಸಾಲಮನ್ನಾದ ಕುರಿತ ಅತ್ಯಂತ ಮಹತ್ವದ ಸಭೆಗೆ ಗೈರಾಗಿರುವುದು ಅವರ ಬದ್ಧತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

BS Yeddyurappa absent to farmer loan waive off meeting

ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಯಡಿಯೂರಪ್ಪ ಅವರೇ ಈಗ ಸರ್ಕಾರ ಕರೆದರೂ ಸಭೆಯಲ್ಲಿ ಭಾಗವಹಿಸದೇ ಇರುವುದು ಹೋರಾಟದ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಸಾಲಮನ್ನಾಕ್ಕೆ 15 ದಿನದ ಕಾಲಾವಕಾಶ ಕೋರಿದ ಕುಮಾರಸ್ವಾಮಿಸಾಲಮನ್ನಾಕ್ಕೆ 15 ದಿನದ ಕಾಲಾವಕಾಶ ಕೋರಿದ ಕುಮಾರಸ್ವಾಮಿ

ಈ ಬಗ್ಗೆ ಕುಮಾರಸ್ವಾಮಿ ಅವರು ಕೂಡ ಪ್ರತಿಕ್ರಿಯಿಸಿದ್ದು, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಸಭೆಗೆ ಬರುತ್ತಿದ್ದರು, ಅವರ ಬದಲು ಗೋವಿಂದ ಕಾರಜೋಳ ಅವರನ್ನು ಕಳಿಹಿಸುತ್ತಿರಲಿಲ್ಲ ಎಂದಿದ್ದಾರೆ.

English summary
BJP state president BS Yeddyurappa absent to important meeting held in Vidhana Soudha about farmer's loan waive off. He was in Bengaluru itself but not attend the meeting. instead of him he sent BJP leader Govinda Karajola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X