ಜೆಪಿ ನಗರದಲ್ಲಿ ಮಗುವಿನ ಮೇಲೆ ಬೀದಿನಾಯಿ ದಾಳಿ
ಬೆಂಗಳೂರು, ಅ. 20 : ಬೆಂಗಳೂರಿನಲ್ಲಿ ಪುನಃ ಬೀದಿನಾಯಿಗಳ ಬಾಯಿಗೆ ಮಗುವೊಂದು ಸಿಲುಕಿದೆ. ಜೆ.ಪಿ.ನಗರ 9ನೇ ಫೇಸ್ನಲ್ಲಿ ಕುಮಾರಸ್ವಾಮಿ ಎಂಬ ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಗೊಂಡಿರುವ ಬಾಲಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಜೆ.ಪಿ.ನಗರದ 9ನೇ ಫೇಸ್ನಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಕುಮಾರಸ್ವಾಮಿ ಕಾಲುಜಾರಿ ರಸ್ತೆಗೆ ಬಿದ್ದಿದೆ. ಈ ಸಂದರ್ಭದಲ್ಲಿ 5-6 ಬೀದಿನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಬೆನ್ನು, ಕಾಲು ಮತ್ತು ತೊಡೆಗೆ ಕಚ್ಚಿ ನಾಯಿಗಳು ಗಾಯಗೊಳಿಸಿವೆ. [ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]
ಮಗುವನ್ನು ಸಿದ್ದಯ್ಯ ರಸ್ತೆಯಲ್ಲಿರುವ ರೆಫರಲ್ ಆಸ್ಪತ್ರೆ ಮತ್ತು ಕಿಮ್ಸ್ ಆಸ್ಪತ್ರೆಗಳಿಗೆ ಕರೆದುಕೊಂಡು ಬಂದಾಗ ವೈದ್ಯರಿಲ್ಲ ಎಂದು ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. [ಮೂರು ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ]
ಅಧಿಕಾರಿಗಳು ಆಗಮಿಸಿಲ್ಲ : ಇಂದು ಬೆಳಗ್ಗೆ ಈ ಘಟನೆ ನಡೆದಿದ್ದರೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿಲ್ಲ ಎಂದು ಕಟುಂಬವರ್ಗದವರು ಆರೋಪಿಸುತ್ತಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಲು ಪ್ರಯತ್ನ ನಡೆಸಲಾಗಿದೆ.
ಸಚಿವರ
ಪ್ರತಿಕ್ರಿಯೆ
:
ಮಗುವಿನ
ಮೇಲೆ
ಬೀದಿನಾಯಿ
ಮಾಡಿದ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾಧ್ಯಮಗಳಿಗೆ
ಪ್ರತಿಕ್ರಿಯೆ
ನೀಡಿರುವ
ಆರೋಗ್ಯ
ಸಚಿವ
ಯು.ಟಿ.ಖಾದರ್,
ಮಗುವಿಗೆ
ಸದ್ಯ
ಅಗತ್ಯ
ಚಿಕಿತ್ಸೆ
ನೀಡಲಾಗುತ್ತಿದೆ.
ಎರಡು
ಆಸ್ಪತ್ರೆಗಳಲ್ಲಿ
ಮಗುವಿಗೆ
ಚಿಕಿತ್ಸೆ
ನೀಡಲು
ನಿರಾಕರಿಸಿರುವ
ಬಗ್ಗೆ
ವಿವರ
ಪಡೆದು
ಅಗತ್ಯ
ಕ್ರಮಗಳನ್ನು
ಕೈಗೊಳ್ಳುತ್ತೇನೆ
ಎಂದು
ಭರವಸೆ
ನೀಡಿದ್ದಾರೆ.