ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರಿಗೊಂದು ಸಿಹಿ ಸುದ್ದಿ: ಬಿಎಂಟಿಸಿ ಬಸ್ ದರ ಇಳಿಕೆ

ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ಎರಡನೇ ಹಂತದ ದರವನ್ನು 12 ರಿಂದ 10 ರೂ. ಗೆ ಇಳಿಸಲಾಗಿದೆ. ಏಪ್ರಿಲ್ 15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರತಿ ಹಂತದ ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ದರ ಪರಿಷ್ಕರಣೆಯ ಪಟ್ಟಿ ಇಂತಿದೆ.

* ಎರಡನೇ ಹಂತದ ದರ 12ರಿಂದ 10ರೂ.ಗೆ ಇಳಿಕೆ
* 3,6,8ನೇ ಹಂತದಲ್ಲಿ 1 ರೂ ಹೆಚ್ಚಳ
ಹವಾನಿಯಂತ್ರಿತ ಬಸ್ ಗಳ ದರದಲ್ಲೂ ಪರಿಷ್ಕರಣೆ
* ಮೊದಲ ಹಂತ 15 ರಿಂದ 10ರೂ.ಗೆ ಇಳಿಕೆ
* 3ನೇ ಹಂತ 35 ರಿಂದ 30 ರೂ.ಗೆ ಇಳಿಕೆ
* 4ನೇ ಹಂತ 45 ರಿಂದ 40 ರೂ.ಗೆ ಇಳಿಕೆ
* 14ನೇ ಹಂತ 95 ರಿಂದ 90 ರೂ.ಗೆ ಇಳಿಕೆ ಮಾಡಲಾಗಿದೆ

English summary
BMTC revises bus fare in Karnataka effective from 15th April
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X