ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಬಂದ್: ಬಸ್‌ ಸಂಚಾರ ಪುನಾರಂಭ ಮಾಡಿದ ಬಿಎಂಟಿಸಿ, ಕೆಎಸ್ಆರ್ ಟಿಸಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಭಾರತ್ ಬಂದ್ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್‌ಗಳ ಸಂಚಾರ ನಿಧಾನಗತಿಯಲ್ಲಿ ಆರಂಭಗೊಳ್ಳುತ್ತಿದೆ.

ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ

ಬೆಂಗಳೂರಿನ ಕೇಂದ್ರ ಭಾಗವನ್ನು ಹೊರತುಪಡಿಸಿ ಹೊರವಲಯದಲ್ಲಿ ಬಸ್‌ ಗಳ ಸಂಚಾರ ಆರಂಭವಾಗಿದೆ. ಮೆಜೆಸ್ಟಿಕ್ ನಿಂದ ಕೆಂಪೇಗೌಡ ಏರ್‌ಪೋರ್ಟ್ ಗೆ 2 ಬಸ್‌ಗಳು ಹೊರಟಿವೆ.

ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಕೆಆರ್ ಮಾರುಕಟ್ಟೆ ಸುತ್ತಮುತ್ತ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು, ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದೆ, ಮೆಜೆಸ್ಟಿಕ್‌ ಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್‌ಗಳು ಆಗಮಿಸುತ್ತಿವೆ. ಬಂದ್ ಕುರಿತು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮಾತನಾಡಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ನಡೆದಿಲ್ಲ.

BMTC, KSRTC resume bus services to various destinations

ರೈಲ್ವೆ ನಿಲ್ದಾಂ, ಮೇಖ್ರಿ ವೃತ್ತ, ಮೈಶೂರು ವೃತ್ತ, ಟೌನ್ ಹಾಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ. ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ, ಚಾಲುಕ್ಯ ವೃತ್ತದಲ್ಲಿ ಅನುಚಿತವಾಗಿ ವರ್ತಿಸಿದರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಬಂದ್ ಹಿನ್ನೆಲೆಯಲ್ಲಿ ನಾಲ್ಕು ಕೆಎಸ್ ಆರ್ ಟಿಸಿ ನಿಗಮಗಳಿಗೆ ನಷ್ಟ ಉಂಟಾಗಿದೆ. ಕೆಎಸ್ ಆರ್ ಟಿಸಿ ಗೆ 8.50 ಕೋಟಿ, ಬಿಎಂಟಿಸಿಗೆ 4.50 ಕೋಟಿ ರೂ. ನಷ್ಟವಾಗಿದೆ. ಒಂದು ದಿನಕ್ಕೆ ಸಾರಿಗೆ ನಿಗಮಗಳಿಗೆ 21.5ರಿಂದ 22 ಕೋಟಿಯಷ್ಟು ನಷ್ಟ ಉಂಟಾಗಿದೆ. ರಾಮನಗರ, ದಾವಣಗೆರೆ, ಚಾಮರಾಜನಗರ, ಕೋಲಾರ, ಕೆಜಿಎಫ್ ಬಸ್‌ ನಿಲ್ದಾಣದಿಂದ ಕೂಡ ಬಸ್ ಸಂಚಾರ ಆರಂಭವಾಗಿದೆ.

English summary
After Bharat bundh call agitation was nearing to complete, BMTC and KSRTC were resumed bus service to various destinations from Bangalore after 3pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X