ಕುಮಾರಸ್ವಾಮಿಯವರಿಗೆ ಶೃಂಗೇರಿ ಶಾರದೆಯ ಆಶೀರ್ವಾದ ಬೇಡಿದ ಬಿಜೆಪಿ!
Recommended Video
ಬೆಂಗಳೂರು, ಸೆಪ್ಟೆಂಬರ್ 22: ಶೃಂಗೇರಿ ಶಾರದಾಂಬೆಯ ದರ್ಶನಕ್ಕೆಂದು ತೆರಳಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ದೇವಿಯು ಅನುಗ್ರಹ ನೀಡಲಿ ಎಂದು ಕರ್ನಾಟಕ ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಎಚ್ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
"ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ ಎಚ್ ಡಿ ಕುಮಾರಸ್ವಾಮಿಯವರೇ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, ಕುಮಾರಸ್ವಾಮಿಯವರ ಟೆಂಪಲ್ ರನ್ ಅನ್ನು ಟೀಕಿಸಿದೆ.
'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!
ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ @hd_kumaraswamyಯವರೇ!
— BJP Karnataka (@BJP4Karnataka) September 22, 2018
"100 ದಿನದ ತಮ್ಮ ಅಧಿಕಾರಾವಧಿಯಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳಿಗೆ ಮುಖ್ಯಮಂತ್ರಿಗಳು ತೆರಳಿದ್ದಾರೆ. ಆದರೂ ತಮ್ಮ ಗೂಂಡಾಗಳನ್ನು ದಂಗೆಗೆ ಕರೆಯವ ಅವರ ಮನಸ್ಥಿತಿ ಬದಲಾಗಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಗುಣಗಳು ಹೋಗದೆ ಇದ್ದರೆ ನೀವು ಎಷ್ಟು ದೇವಾಲಯಕ್ಕೆ ತೆರಳಿದರೂ ಪ್ರಯೋಜನವಿಲ್ಲ" ಎಂದು ಶಾಸಕ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.
Even 50+ temple visit in 100 days could not change the person from calling upon his goons to go on rioting. It doesn’t matter how many temples he visits when the thought of evil resides within him. #TempleRun https://t.co/z0UWqe8aN7
— Arvind Limbavali (@bjparvind) September 22, 2018
ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, 'ಬಿಎಸ್ ಯಡಿಯೂರಪ್ಪ ಅವರು ಪದೇ ಪದೇ ಸಮ್ಮಿಶ್ರ ಸರ್ಕಾರದ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದರೆ, ಬಿಜೆಪಿ ವಿರುದ್ಧ ದಂಗೆ ಏಳಲು ಜನರಿಗೆ ನಾನೇ ಕರೆ ನೀಡುತ್ತೇನೆ' ಎಂಬ ಹೇಳಿಕೆ ನೀಡಿದ್ದರು. ರಾಜ್ಯದ ಮುಖ್ಯಮಂತ್ರಿಯೇ ಹೀಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂಥ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು.