'ಹೆಬ್ಬಾಳ ಉಪ ಚುನಾವಣೆಯಲ್ಲಿ ಗೆಲುವು ನಮ್ಮದು'
ಬೆಂಗಳೂರು, ಜನವರಿ 27 : 'ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ' ಎಂದು ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಹೇಳಿದರು. 'ಹೆಬ್ಬಾಳ ಕ್ಷೇತ್ರದಲ್ಲಿ ನಾಲ್ವರು ಬಿಜೆಪಿಯ ಬಿಬಿಎಂಪಿ ಸದಸ್ಯರಿದ್ದಾರೆ. ನೂರಾರು ಕಾರ್ಯಕರ್ತರಿದ್ದಾರೆ. ಆದ್ದರಿಂದ, ಗೆಲುವು ಸಾಧಿಸುವುದು ಸುಲಭವಾಗಲಿದೆ' ಎಂದು ಅವರು ತಿಳಿಸಿದರು.
ಬುಧವಾರ
ಬಿಜೆಪಿ
ಮುಖಂಡರು
ಹಾಗೂ
ಅಪಾರ
ಬೆಂಬಲಿಗರ
ಜೊತೆ
ತೆರಳಿ,
ಹೆಬ್ಬಾಳ
ಕ್ಷೇತ್ರದ
ಉಪ
ಚುನಾವಣೆಗೆ
ವೈ.ನಾರಾಯಣ
ಸ್ವಾಮಿ
ಅವರು
ನಾಮಪತ್ರ
ಸಲ್ಲಿಸಿದರು.
ನಂತರ
ಮಾತನಾಡಿದ
ಅವರು,
'ಉಪ
ಚುನಾವಣೆಯಲ್ಲಿ
ಗೆಲುವು
ನಮ್ಮದೇ'
ಎಂದು
ಹೇಳಿದರು.
[3
ಕ್ಷೇತ್ರಗಳ
ಉಪ
ಚುನಾವಣೆ
:
ಎಲ್ಲಾ
ಪಕ್ಷದ
ಅಭ್ಯರ್ಥಿಗಳ
ಪಟ್ಟಿ]
'ಹೆಬ್ಬಾಳ ಬಿಜೆಪಿಯ ಭದ್ರಕೋಟೆಯಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕಾಗಿತ್ತು. ಆದರೆ, ನಾಲ್ವರು ಜಯಗಳಿಸಿದ್ದು, ಉಳಿದ ಮೂವರು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ' ಎಂದರು. [2013ರ ವಿಧಾನಸಭೆ ಚುನಾವಣಾ ಫಲಿತಾಂಶ]
'ನಾಲ್ವರು
ಬಿಬಿಎಂಪಿ
ಸದಸ್ಯರು,
ನೂರಾರು
ಕಾರ್ಯಕರ್ತರು
ಕ್ಷೇತ್ರದಲ್ಲಿದ್ದಾರೆ.
ಆದ್ದರಿಂದ,
ಉಪ
ಚುನಾವಣೆಯಲ್ಲಿ
ಗೆಲುವು
ಸಾಧಿಸುತ್ತೇವೆ.
ರಾಜ್ಯದಲ್ಲಿ
ಯಾವುದೇ
ಸರ್ಕಾರವಿದ್ದರೂ
ಚುನಾವಣೆಯನ್ನು
ಸಮರ್ಥವಾಗಿ
ಎದುರಿಸಿ
ನಾವು
ಗೆಲ್ಲುತ್ತೇವೆ'
ಎಂದು
ನಾರಾಯಣ
ಸ್ವಾಮಿ
ವಿಶ್ವಾಸ
ವ್ಯಕ್ತಪಡಿಸಿದರು.
['ಸಿದ್ದರಾಮಯ್ಯ
ಮಾತಿಗೆ
ಕಾಂಗ್ರೆಸ್ಸಿನಲ್ಲಿ
ಕಿಮ್ಮತ್ತಿಲ್ಲ']
ಕಾಂಗ್ರೆಸ್ನಲ್ಲಿ ಗೊಂದಲ : 'ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟಾಗಿತ್ತು. ಇದರ ಲಾಭ ಬಿಜೆಪಿಗೆ ಆಗಲಿದ್ದು, ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಕ್ಷೇತ್ರದ ಮತದಾರರ ಆಶೀರ್ವಾದ ನಮ್ಮ ಮೇಲಿದೆ' ಎಂದು ಹೇಳಿದರು.
ಶಾಸಕ ಜಗದೀಶ್ ಕುಮಾರ್ (ಬಿಜೆಪಿ) ನಿಧನದಿಂದ ತೆರವಾಗಿರುವ ಹೆಬ್ಬಾಳ ಕ್ಷೇತ್ರದಲ್ಲಿ ಫೆ.13ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ರೆಹಮಾನ್ ಷರೀಫ್, ಬಿಜೆಪಿಯಿಂದ ವೈ.ನಾರಾಯಣ ಸ್ವಾಮಿ ಮತ್ತು ಜೆಡಿಎಸ್ನಿಂದ ಇಸ್ಮಾಯಿಲ್ ಷರೀಫ್ ಅವರು ಅಭ್ಯರ್ಥಿಗಳಾಗಿದ್ದಾರೆ.