ಆಕ್ರೋಶ ದಿವಸದಂದು ಕರ್ನಾಟಕದಲ್ಲಿ ಏನಿರುತ್ತೆ? ಏನಿಲ್ಲ?
ಅಧಿಕ ಮುಖಬೆಲೆಯ ನೋಟು ನಿಷೇದ ಕ್ರಮ ವಿರೋಧಿಸಿ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿಸ ಸೋಮವಾರ ದೇಶದಾದ್ಯಂತ ಆಕ್ರೋಶ್ ದಿವಸ್ ಹಮ್ಮಿಕೊಂಡಿವೆ.
ಬೆಂಗಳೂರು, ನವೆಂಬರ್, 27: ನೋಟು ನಿಷೇಧ ವಿರೋಧಿಸಿ ಪ್ರತಿಪಕ್ಷಗಳೆಲ್ಲಾ ಒಟ್ಟಾಗಿ ಸೇರಿ. ಸೋಮವಾರ ಭಾರತದಾದ್ಯಂತ ಆಕ್ರೋಶ್ ದಿವಸ್ ಕರೆ ನೀಡಿವೆ. ಮುಖ್ಯವಾಗಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಕರೆ ನೀಡಿರುವ ಭಾರತ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಆದರೆ ನೋಟು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
ಕೆಎಸ್
ಆರ್
ಸಿ
ಟಿ
ಸಿ
ಮತ್ತು
ಬಿಎಂಟಿಸಿ
ಬಸ್
ಗಳ
ಸಂಚಾರದಲ್ಲಿ
ವ್ಯತ್ಯಯ
ಉಂಟಾಗುವ
ಸಾಧ್ಯತೆ
ಇದೆ.
ಪರಿಸ್ಥಿತಿಗೆ
ಅನುಗುಣವಾಗಿ
ಶಾಲಾ
ಕಾಲೇಜುಗಳಿಗೆ
ರಜೆ
ಘೋಷಿಸುವ
ಅಧಿಕಾರವನ್ನು
ಆಯಾ
ಜಿಲ್ಲಾಧಿಕಾರಿಗಳಿಗೆ
ನೀಡಲಾಗಿದೆ.
ಇದನ್ನು
ಗಮನಿಸಿ
* ಸೋಮವಾರ ನಡೆಯಬೇಕಿದ್ದ ಬೆಂಗಳೂರು ವಿವಿ. ತುಮಕೂರು ವಿವಿ. ಧಾರವಾಡ ಕರ್ನಾಟಕ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
* ಬೆಂಗಳೂರು ಖಾಸಗಿ ಶಾಲೆಗಳಿಗೆ ಬಂದ್ ಇಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಘೋಷಿಸಿದೆ.
* ಬ್ಯಾಂಕ್, ಸಿನಿಮಾ ಹಾಲ್, ಬಸ್, ಮೆಟ್ರೋ, ಶಾಪಿಂಗ್ ಮಾಲ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
* ರಾಮನಗರ: ಶಾಲೆ ಕಾಲೇಜುಗಳಿಗೆ ರಜೆ ಇಲ್ಲ ಬಸ್ ಸಂಚಾರ ಎಂದಿನಂತೆ ಇರಲಿದೆ: ಜಿಲ್ಲಾಧಿಕಾರಿ ಬಿ.ಆರ್. ಮಮತಾ
* ಹಾವೇರಿ: ಶಾಲೆ ಕಾಲೇಜುಗಳಿಗೆ ರಜೆ ಇಲ್ಲ ಬಸ್ ಸಂಚಾರ ಎಂದಿನಂತೆ ಇರಲಿದೆ ಡಿಡಿಪಿಐ ಶಿವನಗೌಡ ಪಾಟೀಲ್
* ಮೈಸೂರು: ಜಿಲ್ಲೆಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ, ಬಸ್ ಸಂಚಾರ ಎಂದಿನಂತೆ ಇರಲಿದೆ: ಡಿ. ರಂದೀಪ್
* ಚಿತ್ರದುರ್ಗ: ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಶ್ರೀ ರಂಗಯ್ಯ
* ಕೋಲಾರ: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ, ಬಸ್ ಸಂಚಾರ ಎಂದಿನಂತೆ ಇರಲಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ: ಜಿಲ್ಲಾಧಿಕಾರಿ ಕೆ.ವಿ.ತ್ರಿಲೋಕಚಂದ್ರ
* ರಾಯಚೂರು: ಜಿಲ್ಲೆಯಾದ್ಯಂತ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
* ಕಲಬುರಗಿ: ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ, ಎಂದಿನಂತೆ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಲಿವೆ: ಜಿಲ್ಲಾಧಿಕಾರಿ ಉಜ್ವಲ್ ಕುಮಾರ್
* ಶಿವಮೊಗ್ಗ: ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ: ಡಿಡಿಪಿಐ ಪಿ.ಎಸ್. ಮಚಾದೋ.
* ಬೆಳಗಾವಿ: ಬೆಳಗಾವಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಇನ್ನೂ ನಿರ್ಧರಿಸಿಲ್ಲ: ಜಿಲ್ಲಾಧಿಕಾರಿ ಎನ್ .ಜಯರಾಮ್
* ಬೀದರ್: ಜಿಲ್ಲೆಯಲ್ಲಿ ಎಂದಿನಂತೆ ಶಾಲಾ- ಕಾಲೇಜುಗಳು ಇರಲಿವೆ, ಸಾರ್ವಜನಿಕ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ: ಜಿಲ್ಲಾಧಿಕಾರಿ ಅನುರಾಗ್ ತಿವಾರಿ
* ಧಾರವಾಡ: ಜಿಲ್ಲೆಯಾದ್ಯಂತ ಎಂದಿನಂತೆ ಶಾಲಾ ಕಾಲೇಜುಗಳು ಕೆಲಸ ನಿರ್ವಹಸಲಿವೆ. ರಜೆ ಇಲ್ಲ: ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ
* ಕೊಪ್ಪಳ: ಸಾರ್ವಜನಕ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ: ಜಿಲ್ಲಾಧಿಕಾರಿ ಎಂ. ಕನಗವಲ್ಲಿ
* ಗದಗ: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ, ಬಸ್ ಸಂಚಾರದಲ್ಲಿ ಯಥಾಸ್ಥಿತಿ: ಜಿಲ್ಲಾಧಿಕಾರಿ ಎನ್. ಎಸ್. ಪ್ರಸನ್ನ ಕುಮಾರ್
* ಕೊಡಗು: ಶಾಲಾ ಕಾಲೇಜುಗಳಿಗ ರಜೆ ಇಲ್ಲ, ಸರ್ಕಾರಿ ಬಸ್, ಆಟೋ ಎಂದಿನಂತೆ ಕಾರ್ಯನಿರ್ವಹಿಸಲಿವೆ: ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್