2016: ಒನ್ಇಂಡಿಯಾ ಫೇಸ್ಬುಕ್ ಟಾಪ್ ಸುದ್ದಿಗಳು
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.
ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. 2016ರಲ್ಲಿ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪಟ್ಟಿ ಇಲ್ಲಿದೆ.[ಫಿಲ್ಮಿಬೀಟ್ ಫೇಸ್ಬುಕ್ ಟಾಪ್ ಸುದ್ದಿಗಳು]
ಕನ್ನಡದ
ಅಗ್ರ
ಅಂತರ್ಜಾಲ
ತಾಣವಾಗಿರುವ
ದಟ್ಸ್
ಕನ್ನಡ
(ಒನ್ಇಂಡಿಯಾ
ಕನ್ನಡ)
2000ರಿಂದ
ಕಾರ್ಯನಿರ್ವಹಿಸುತ್ತಿದೆ.
ವಿಳಾಸ
:
/.
ಕನ್ನಡ
ಸುದ್ದಿಗಳನ್ನು
ಮೊಬೈಲ್
ನಲ್ಲಿ
http://m.oneindia.in/kannada/
ತಾಣದಲ್ಲಿಯೂ
ಪಡೆಯಬಹುದು.
ನಮ್ಮ
ಫೇಸ್
ಬುಕ್
ವಿಳಾಸ:
https://www.facebook.com/oneindiakannada/
ಜಯಲಲಿತಾ ಆತ್ಮ ಅಂತರ್ ಪಿಶಾಚಿಯಾಗುವುದೇ?
ವೈದಿಕ ಸಂಪ್ರದಾಯದಂತೆ ದೇಹಕ್ಕೆ ಸರಿಯಾದ ಅಂತ್ಯ ಸಂಸ್ಕಾರ ನಡೆಸದಿದ್ದರೆ ಆ ಜೀವಾತ್ಮ ಪ್ರೇತಾತ್ಮವಾಗಿ ಅಲ್ಲೇ ವಿಲವಿಲ ಒದ್ದಾಡುತ್ತ ಅಂತರ್ಪಿಶಾಚಿಯಾಗಿ ಅಲೆದಾಡುತ್ತೆ ಎನ್ನುವುದು ವೈದಿಕ ಬ್ರಾಹ್ಮಣ ಸಂಪ್ರದಾಯಸ್ಥರ ಅಚಲವಾದ ನಂಬಿಕೆ. ಜಯಲಲಿತಾ ಆತ್ಮ ಅಂತರ್ ಪಿಶಾಚಿಯಾಗುವುದೇ? ಮುಂದೆ ಓದಿ...
ಹುತ್ತರಿ ಹಬ್ಬದ ಆಚರಣೆ ಬಗ್ಗೆ ಓದಿರಿ
ಕೊಡಗಿನ ಸುಗ್ಗಿಹಬ್ಬ ಎಂದೇ ಕರೆಯಲ್ಪಡುವ ಹುತ್ತರಿ ಹಬ್ಬವು ಡಿಸೆಂಬರ್ 13 ರಂದು ಸಡಗರ ಸಂಭ್ರಮದಿಂದ ಸಂಪ್ರದಾಯಬದ್ಧವಾಗಿ ನಡೆಯಲಿದೆ. ಹುತ್ತರಿ ಹಬ್ಬದ ಆಚರಣೆ ಬಗ್ಗೆ ಓದಿರಿ
ಕೆಪಿಎಸ್ ಸಿ ಹುದ್ದೆಗಳ ಕುರಿತ ಪೋಸ್ಟ್
ಕರ್ನಾಟಕ ಲೋಕ ಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರ ಹುದ್ದೆಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೋಸ್ಟ್ ಓದಿರಿ
ರಮೇಶ್ ಗೌಡ ಆತ್ಮಹತ್ಯೆ ಪತ್ರ ಇಲ್ಲಿ ಓದಿ
ಮಾಜಿ ಸಚಿವ ಜನಾರ್ದನ ರೆಡ್ಡಿಯ ಮಗಳ ಮದುವೆಗೆ ನೂರು ಕೋಟಿ ರುಪಾಯಿ ಹಣವನ್ನು ಬದಲಿಸಿಕೊಟ್ಟ ಭೀಮಾ ನಾಯ್ಕ್ ಅವರ ವಾಹನ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯಾ ಪತ್ರದಲ್ಲಿ ಗಾಲಿ ರೆಡ್ಡಿ ಭ್ರಷ್ಟಾಚಾರ ಬಹಿರಂಗಗೊಂಡಿದೆ. ಆತ್ಮಹತ್ಯಾ ಪತ್ರದ ವಿವರ ಇಲ್ಲಿ ಓದಿ
ಕರ್ನಾಟಕ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ
ಖಾಲಿ ಇರುವ ಕ್ಲರ್ಕ್ ಹುದ್ದೆಗಳಿಗೆ ಕರ್ನಾಟಕ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬ್ರಾಹ್ಮಣರನ್ನು ಬೈಯುವವರಿಗೆ ಬೆಳಗೆರೆ ಪ್ರಶ್ನೆ
ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು ಮುಂದೆ ಓದಿ
ಐಟಿ ಅಧಿಕಾರಿಗಳಿಗೆ ದಾಳಿ ಮುಂದುವರೆಸಿ ಎಂದ ಮೋದಿ
ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಪರೂಪಕ್ಕೆ ಎನ್ನುವಂತೆ, ಆದಾಯ ತೆರಿಗೆ ಅಧಿಕಾರಿಗಳ ಜೊತೆ ನೇರ ಸಂಪರ್ಕ ಪಡೆದುಕೊಂಡಿರುವ ಪ್ರಧಾನಿ ಮೋದಿ, ರೈಡ್ ನಡೆಸಿ.. ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನಷ್ಟು ಓದಿ
ರದ್ದು ಮಾಡುವ ಐಡಿಯಾ
ಪ್ರಧಾನಿ ನರೇಂದ್ರ ಮೋದಿ ಅವರಿಗೆ 500, 1000 ರುಪಾಯಿ ನೋಟು ರದ್ದು ಮಾಡುವ ಐಡಿಯಾ ಕೊಟ್ಟಿದ್ದ ಪುಣೆ ಮೂಲದ 'ಅರ್ಥ ಕ್ರಾಂತಿ'ಯ ಸಲಹೆಗಳಿಂದ ನಿಜಕ್ಕೂ ದೇಶದಲ್ಲಿ ಕ್ರಾಂತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದು ಸೊಗಸಾದ ಸಲಹೆ ಇದೇ ಸಂಸ್ಥೆ ನೀಡಿತ್ತು ಎಂಬ ಸುದ್ದಿ ಜೋರಾಗಿ ಹರಿದಾಡಿದೆ.
ಮಹದೇವಶ್ವರನ ಭೇಟಿಗೆ ಬಂದ ನಾಗಪ್ಪ!
ನಾಗರಹಾವನ್ನು ಪೂಜ್ಯಭಾವನೆಯಿಂದ ನಾವು ಕಾಣುತ್ತೇವೆ. ಹೀಗಿರುವಾಗ ಅದು ದೇವಸ್ಥಾನಕ್ಕೆ ಬಂದರಂತೂ ಭಕ್ತರ ಖುಷಿಗೆ ಪಾರವೇ ಇರುವುದಿಲ್ಲ. ಇಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಸಮೀಪದ ಕೋಡಿ ಮಹದೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಮುಂದೆ ಓದಿ
ರಿಯಲ್ ಸ್ಟಾರ್ ಉಪೇಂದ್ರ 'ನೋಟ್ ಬ್ಯಾನ್' ಬಗ್ಗೆ
ನರೇಂದ್ರ ಮೋದಿ ಘೋಷಣೆ ಮಾಡುವ ಮುನ್ನ...ಅಂದ್ರೆ ಒಂಬತ್ತು ತಿಂಗಳ ಹಿಂದೆಯೇ ಭ್ರಷ್ಟಾಚಾರ, ಕಾಳಧನ, ಖೋಟಾ ನೋಟು...ಇವೆಲ್ಲದಕ್ಕೂ ಕಡಿವಾಣ ಹಾಕಲು ರಿಯಲ್ ಸ್ಟಾರ್ ಉಪೇಂದ್ರ 'ನೋಟ್ ಬ್ಯಾನ್' ಥಿಯರಿ ಪ್ರಸ್ತಾಪಿಸಿದ್ದರು ಅಂದ್ರೆ ನೀವು ನಂಬಲೇಬೇಕು.!
ಬ್ರಹ್ಮಿಣಿ ಧರಿಸಿದ್ದ ವಜ್ರಾಭರಣದ ಬೆಲೆ ಎಷ್ಟು?
ಒಂದೇ ಕಡೆ ಎಷ್ಟೊಂದು ವಜ್ರಗಳನ್ನು ಎಂದೂ ನೋಡಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ಗಾಲಿ ರೆಡ್ಡಿ ಮಗಳ ಮದುವೆ ವೈಭವ ಕಂಡು ಉದ್ಗರಿಸಿದ್ದಾರೆ. ಬೆಂಗಳೂರಿನ ಐಷಾರಾಮಿ ಮದುವೆಯ ಲೆಕ್ಕಾಚಾರ ಹಾಗಿರಲಿ, ವಧು ಬ್ರಹ್ಮಿಣಿ ತೊಟ್ಟ ಉಡುಗೆ, ಧರಿಸಿದ್ದ ಆಭರಣಗಳು ಎಲ್ಲರ ಕಣ್ಣರಳುವಂತೆ ಮಾಡಿದ್ದು ಸುಳ್ಳಲ್ಲ. ಮುಂದೆ ಓದಿ
ಹೃದಯವಂತಿಕೆ ಮೆರೆದ ಪೊಲೀಸ್ ಕುಮಾರ್
ಸಮವಸ್ತ್ರ ಧರಿಸಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟಕು ಹೃದಯದವರೇನಲ್ಲ, ಅವರಲ್ಲೂ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮುಂದೆ ಓದಿ
ಮಂಗಳೂರಿನ ಮೀನುಗಾರರು
ನಟ ದುನಿಯಾ ವಿಜಿ ಆಭಿನಯದ ಕ್ಲೈಮ್ಯಾಕ್ಸ್ ವೇಳೆ ಖಳ ನಟರಾದ ಅನಿಲ್ ಮತ್ತು ಉದಯ್ ಕೆರೆ ಹಾರಿ ಮೃತರಾದ ನಟರನ್ನು ಪತ್ತೆ ಹಚ್ಚುವಲ್ಲಿ ಮಂಗಳೂರಿನ ಮೀನುಗಾರರು ಸಾಹಸ ಮೆರೆದು ಯಶಸ್ವಿಯಾಗಿದ್ದಾರೆ.