ಲಾಲ್ ಬಾಗ್ಗೆ ಮಕ್ಕಳ ಕರೆತಂದ ಕುಡುಕ ಚಾಲಕರ ಬಂಧನ
ಬೆಂಗಳೂರು , ಆಗಸ್ಟ್, 26: ಶಾಲಾ ವಾಹನದಲ್ಲಿ ಮಕ್ಕಳನ್ನು ಪಿಕ್ ನಿಕ್ ಗೆ ಎಂದು ಲಾಲ್ ಬಾಗ್ ಗೆ ಕರೆತಂದಿದ್ದ ಕುಡುಕ ಚಾಲಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಮವಸ್ತ್ರವನ್ನು ಧರಿಸದೆ ನಶೆಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದ ಚಾಲಕರಿಬ್ಬರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಸ್ ಸಮೇತ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.[ಓಣಂ ಹಬಕ್ಕೆ ಆನ್ಲೈನ್ ಮೂಲಕವೇ ಮದ್ಯ ಸಮಾರಾಧನೆ]
ಬೆಳ್ಳಂದೂರು ಸಮೀಪದ ಖಾಸಗಿ ಶಾಲೆಯ ಎರಡು ವಾಹನದಲ್ಲಿ ಸುಮಾರು 100 ಕ್ಕೂ ಅಧಿಕ ಮಕ್ಕಳನ್ನು ಪಿಕ್ ನಿಕ್ ಗೆ ಎಂದು ಲಾಲ್ ಬಾಗ್ ಗೆ ಕರೆತರಲಾಗುತ್ತಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಚಾಲಕರು ಅಮಲಿನಲ್ಲಿ ಇರುವುದು ಗೊತ್ತಾಗಿದೆ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ]
ನಶೆಯಲ್ಲಿದ್ದ ಯುವತಿ ಲಾಲ್ ಬಾಗ್ ವೇಸ್ಟ ಗೇಟ್ ಬಳಿ ಬುಧವಾರ ರಾತ್ರಿ ಪಾದಚಾರಿಯೊಬ್ಬರನ್ನು ಬಲಿ ಪಡೆದುಕೊಂದ್ದಳು. ಕಾರು ಚಾಲಕಿ ರಾಜಾಜಿ ನಗರದ ನಿವಾಸಿ ಭವತಿರಾಣಿ(26) ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ವೇಳೆ ಆಕೆ ನಶೆಯಲ್ಲಿದ್ದದ್ದು ಗೊತ್ತಾಗಿತ್ತು. ಈ ಪ್ರಕರಣ ಹಸಿಯಾಗಿರುವಾಗಲೇ ಮತ್ತಿಬ್ಬರು ಕುಡುಕ ಚಾಲಕರನ್ನು ಬಂಧಿಸಲಾಗಿದೆ.