ರಾಜಗೋಪಾಲ ನಗರ, ಹೆಗ್ಗನಹಳ್ಳಿ ಇನ್ನೂ ಉದ್ವಿಗ್ನ
ಬೆಂಗಳೂರು, ಸೆ. 13: ಕಾವೇರಿ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ, ಹೆಗ್ಗನಹಳ್ಳಿ ಸೇರಿದಂತೆ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಗ್ಯಾಲರಿ: ಸುಟ್ಟು ಭಸ್ಮವಾದ ಬಸ್ಸು ಲಾರಿಗಳು
ಆದರೆ, ರಾಜಗೋಪಾಲನಗರದಲ್ಲಿ ಕರ್ಫ್ಯೂ ಆದೇಶ ಉಲ್ಲಂಘಿಸಿ ಲಾರಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.[ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]
ಇನ್ನೊಂದೆಡೆ ಹೆಗ್ಗನಹಳ್ಳಿಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿಮತ್ತೆ ಪ್ರತಿಭಟನೆ ಶುರುವಾಗಿದೆ. ಸಮೀಪದ ಪೀಣ್ಯದಲ್ಲಿ ಟೈರ್ ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಗುವಿನ ವಾತಾವರಣ ಉಂಟಾಗಿದೆ.[ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ]
ನಗರದಲ್ಲಿ
ಕೆಲವೆಡೆ
ಬಿಎಂಟಿಸಿ
ಬಸ್
ಗಳ
ಓಡಾಟ
ಆರಂಭಗೊಂಡಿದೆ.
ಮೆಟ್ರೋ
ರೈಲುಗಳ
ಓಡಾಟ
ಎರಡನೇ
ದಿನವೂ
ರದ್ದಾಗಿದೆ.
Share #CauveryVandalism videos/pics to @BlrCityPolice@btppubliceye /Whatsapp 9480801000 /mail: [email protected] https://t.co/ls7Vyam83e
— Pratap Reddy, IPS (@PratapReddyC) September 13, 2016
ಈ ನಡುವೆ ನಿನ್ನೆ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳಿದ್ದರೆ ನಮಗೆ ಕಳಿಸಿ @BlrCityPolice ಗೆ ಕಳಿಸಿ ಅಥವಾ ವಾಟ್ಸಪ್ ನಂಬರ್ 9480801000 , ಇಮೇಲ್ : [email protected] ಮಾಡಿ ಎಂದು ಬೆಂಗಳೂರು ನಗರ ಪೊಲೀಸರು ಕೋರಿದ್ದಾರೆ.