50 ಲಕ್ಷ ಡಕಾಯಿತಿ ಪ್ರಕರಣ, ರೌಡಿ ಶೀಟರ್ಗೆ ಪೊಲೀಸರ ಗುಂಡೇಟು
ಬೆಂಗಳೂರು, ಡಿಸೆಂಬರ್ 09 : ಬೆಂಗಳೂರಿನಲ್ಲಿ ಪೊಲೀಸರು ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 50 ಲಕ್ಷ ರೂ. ಡಕಾಯಿತಿ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.
ಭಾನುವಾರ ಬೆಳಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ರಾಜೇಶ್ ಎಂಬ ರೌಡಿ ಶೀಟರ್ ಮೇಲೆ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ರಾಜೇಶ್ ಜೊತೆಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ರಾಜೇಶ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಎಎಸ್ಐಗಳ ಕೈಗೆ ರಿವಾಲ್ವಾರ್!
ರಾಜೇಶ್ ಇತರ ಇಬ್ಬರು ಸಹಚರರ ಜೊತೆ ವಿಶ್ವೇಶ್ವರಯ್ಯ ಲೇಔಟ್ನಲ್ಲಿಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪಿಎಸ್ಐ ರಾಜಶೇಖರಯ್ಯ, ಅಪರಾಧ ವಿಭಾಗದ ಮಹೇಶ್ ಕುಮಾರ್, ದೊರೆಸ್ವಾಮಿ ಅವರ ತಂಡ ಆರೋಪಿಯನ್ನು ಬಂಧಿಸಲು ತೆರಳಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ: ಡಿ.23ಕ್ಕೆ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ
ಆಗ ಪೊಲೀಸರು ಮೇಲೆ ರಾಜೇಶ್ ಡ್ರಾಗರ್ನಿಂದ ಹಲ್ಲೆ ಮಾಡಿದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ರಾಜೇಶ್ ಕಾಲಿಗೆ ಗುಂಡು ಹಾರಿಸಿದರು. ರಾಜೇಶ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜಕೀಯ ಮೇಲಾಟಕ್ಕೆ ಬಲಿಯಾದರೆ ಸಬ್ ಇನ್ಸ್ ಪೆಕ್ಟರ್ ರವಿ ಪವಾರ್ ?
ರಾಜೇಶ್ ಬಲಗಾಲಿಗೆ ಗುಂಡು
ಪೊಲೀಸರು ಬಂಧಿಸಲು ಹೋದಾಗ ರಾಜೇಶ್ ಮಹೇಶ್ ಕುಮಾರ್ ಎಂಬುವವರ ಮೇಲೆ ಡ್ರಾಗರ್ನಿಂದ ಎಡಗೈಗೆ ಹಲ್ಲೆ ಮಾಡಿದ. ಕೊಲೆ ಮಾಡಲು ಪ್ರಯತ್ನ ನಡೆಸಿದ. ಆಗ ಪಿಎಸ್ಐ ರಾಜಶೇಖರಯ್ಯ ಆರೋಪಿಗೆ ಶರಣಾಗುವಂತೆ ಸೂಚಿಸಿದರು, ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಆರೋಪಿ ಪಿಎಸ್ಐ ರಾಜಶೇಖರಯ್ಯ ಅವರ ಕೊಲೆಗೆ ಪ್ರಯತ್ನ ಪಟ್ಟ ಆಗ ಸಿಬ್ಬಂದಿ ಆತ್ಮ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಸರ್ವೀಸ್ ಪಿಸ್ತೂಲ್ನಿಂದ ರಾಜೇಶ್ ಬಲಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ.
50 ಲಕ್ಷ ದರೋಡೆ ಪ್ರಕರಣ
ರೌಡಿ ಶೀಟರ್ ರಾಜೇಶ್ 50 ಲಕ್ಷ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ. 17/7/2018ರಂದು ಇತರರ ಸಹಚರರ ಜೊತೆ ಗಂಗತಯ್ಯ ಎಂಬುವವರ ರೂಮಿಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ 50 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಆರೋಪಿಗಳ ಬಂಧನ
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 12,30,000 ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು, ಫೋರ್ಡ್ ಫಿಯೆಸ್ಟಾ ಕಾರು, ಮಹೀಂದ್ರಾ ವೆರಿಟೋ ಕಾರನ್ನು ವಶಕ್ಕೆ ಪಡೆದಿದ್ದರು.
ಆರೋಪಿಗಳು ತಲೆಮರೆಸಿಕೊಂಡಿದ್ದರು
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಜ್ಞಾನಭಾರತಿ ಠಾಣೆಯ ಜಿ.ವೈ.ಗಿರಿರಾಜ್, ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ಪೆಕ್ಟರ್ ಲಿಂಗರಾಜು ಅವರ ನೇತೃತ್ವದಲ್ಲಿ 2 ತಂಡಗಳನ್ನು ರಚನೆ ಮಾಡಲಾಗಿತ್ತು.