ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ನಾಯಿಗಳ ಸಾಮೂಹಿಕ ಹತ್ಯೆ ಹಿಂದೆ ಬಿಬಿಎಂಪಿ ?

|
Google Oneindia Kannada News

ಬೆಂಗಳೂರು,ಜುಲೈ 22: ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ಚೆನ್ನೈ ಮತ್ತು ಹೈದರಾಬಾದ್ ಗೆ ಮಾತ್ರ ಸೀಮತವಾಗಿಲ್ಲ. ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ನಡೆದಿದ್ದ ಇಂಥದ್ದೇ ಅಮಾನವೀಯ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರಿನ ಅಂಜನಾ ನಗರದ ಅಮೃತ್ ಮಹಲ್ ಸಮೀಪದ ಜಾಗದಲ್ಲಿ 30 ಕ್ಕೂ ಅಧಿಕ ನಾಯಿಗಳನ್ನು ಕತ್ತರಿಸಿ ಬಿಸಾಡಿದ್ದು ಪತ್ತೆಯಾಗಿದೆ. ಒಂದು ನಾಯಿಯನ್ನು ರಕ್ಷಣೆ ಮಾಡಲಾಗಿದೆ.[ನಾಯಿ ಮರಿಗಳನ್ನು ಜೀವಂತ ಸುಟ್ಟ ಇವರಿಗೇನು ಮಾಡಬೇಕು?]

Bengaluru: Mass grave with over 30 street dogs found

ನಾಯಿಯೊಂದು ವಿಕಾರವಾಗಿ ಕೂಗುತ್ತಿದ್ದುದನ್ನು ಕೇಳಿಸಿಕೊಂಡ ಸ್ಥಳೀಯ ಉದ್ಯಮಿಯೊಬ್ಬರು ಪೀಪಲ್ ಫಾರ್ ಆನಿಮಲ್ಸ್ ಸಂಸ್ಥೆಗೆ ಕರೆ ಮಾಡಿದ್ದಾರೆ. ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ 30 ನಾಯಿಗಳ ತುಂಡರಿಸಿದ ದೇಹಗಳು ಪತ್ತೆಯಾಗಿದೆ.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಈ ಅಮಾನವೀಯ ಕೃತ್ಯದ ಹಿಂದೆ ಯಾರಿದ್ದಾರೆ? ನಿಜಕ್ಕೂ ನಾಯಿಗಳನ್ನು ಹತ್ಯೆ ಮಾಡಲು ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ, ಖಾಲಿ ಜಾಗದಲ್ಲಿ ಬಿಬಿಎಂಪಿಯ ಗುತ್ತಿಗೆದಾರರೊಬ್ಬರು ಕಸ ತಂದು ಚೆಲ್ಲುತ್ತಿದ್ದರು. ಆದರೆ ಇಂದು ಬೆಳಗಿನ ದೃಶ್ಯ ನೋಡಿ ಆಘಾತವಾಗಿದೆ. ನಾಯಿಗಳನ್ನು ಗಮನಿಸಿದರೆ ಆರೋಗ್ಯವಾಗಿಯೇ ಇದ್ದವು ಎಂದು ಮೊದಲು ದೃಶ್ಯ ಕಂಡ ಗಾರ್ಡ್ ಕರಾಳ ಚಿತ್ರಣದ ಬಗ್ಗೆ ಹೇಳುತ್ತಾರೆ.

ಬೀದಿ ನಾಯಿಗಳ ಹಾವಳಿ ತಡೆಗೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಇಂಥ ಕೃತ್ಯ ಮಾಡಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿಯೇ? ಎಂಬ ಅನುಮಾನ ಸಹ ಮೂಡಿದೆ. ಅತ್ತ ಜೀವಂತವಾಗಿ ನಾಯಿಗಳನ್ನು ಸುಟ್ಟ ಹೈದರಾಬಾದಿನ ಯುವಕರಿಗೆ ಕೌನ್ಸೆಲಿಂಗ್ ಮಾಡುವಂತೆಯೂ ಸೂಚನೆ ನೀಡಲಾಗಿದೆ.

English summary
Bengaluru: Even as stories of animal cruelty were being reported from Hyderabad and Chennai, it was Bengaluru's turn on Thursday morning after a mass grave with over 30 butchered stray dogs was discovered. While it is unclear as to who is behind the incident and what the motive could be, the report adds quoting activists who suspect pressure from the BBMP to curb the street dog menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X