ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನು ದಿನಾಚರಣೆಯಲ್ಲಿ ಹರಿದು ಬಂದ ಮಾಹಿತಿ ಸಾಗರ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 13: ಕರ್ನಾಟಕ ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೀನುಗಾರರ ದಿನಾಚರಣೆಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವೈಸ್ ಛಾನ್ಸಲರ್ ಡಾ. ಸಿ ವಸುದೇವಪ್ಪ ಉದ್ಘಾಟನೆ ಮಾಡಿದರು.

ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೀನು ತಳಿ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ವಸುದೇವಪ್ಪ ಸಲಹೆ ನೀಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ಸಂಶೋಧನಾ ನಿರ್ದೇಶಕ ಡಾ.ವೈ.ಬಸವರಾಜು ಹಾಜರಿದ್ದು ಅಮೂರ್ ಮೀನು ಸಾಕಣೆ ಕುರಿತು ಹೆಚ್ಚಿನ ಮಾಹಿತಿ ಒದಗಿಸಿಕೊಟ್ಟರು.[ಫಿಶ್ ಪ್ರಿಯರ ಹಸಿವು ನೀಗಿಸುವ ಮೀನಿಗೊಂದು ದಿನಾಚರಣೆ]

fish

ಮನುಷ್ಯನಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಮತ್ಸ್ಯ ಸಂತತಿ ಉಳಿವು ಮತ್ತು ಸಂರಕ್ಷಣೆ ಜತೆಗೆ ಮೀನುಗಾರರಿಗೆ ವಂದನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.[ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]

fish

ವಿಶ್ವದಲ್ಲಿ ಚೀನಾ ನಂತರ ಮೀನುಗಾರಿಕಾ ಕ್ಷೇತ್ರದಲ್ಲಿ ಭಾರತ 2ನೇ ಸ್ಥಾನದಲ್ಲಿ ವಿರಾಜಮಾನವಾಗುವಂತೆ ಮಾಡುವಲ್ಲಿ ಮೀನು ತಳಿ ಸಂಶೋಧಕರು ಹಾಗೂ ಮೀನುಗಾರರ ಪಾತ್ರ ತುಂಬಾ ಮಹತ್ವದ್ದಾಗಿದೆ. 'ಮೀನಿಗೊಂದು ದಿನ' ಎಂಬ ಘೋಷವಾಕ್ಯದಲ್ಲಿ ಕಾರ್ಯಕ್ರಮ ಆಚರಿಸಲಾಯಿತು.

English summary
Karnataka State celebrated the Fish Day on July 12. State The event held at regional center,Veterinary, Animal and Fisheries University, Hebbal. Bengaluru. Dr. C Vasudevappa, vice-chancellor of Agri and Horticulture University, inaugurated Fishermen's day, Man behind Fish 'AMUR' and Fishermen's Day Dr. Y Basavaraju was also present in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X