ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ತನಿಖೆ ಆರಂಭಿಸಿದ ಎನ್ಐಎ
ಬೆಂಗಳೂರು, ಮೇ 21 : 2014ರ ಡಿಸೆಂಬರ್ನಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆ ಎನ್ಐಎಗೆ ಹಸ್ತಾಂತರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಎಫ್ಐಆರ್ ದಾಖಲು ಮಾಡಿಕೊಂಡಿದೆ.
ಬೆಂಗಳೂರು
ಪೊಲೀಸರು
ನಡೆಸುತ್ತಿದ್ದ
ತನಿಖೆಯಲ್ಲಿ
ಯಾವುದೇ
ಪ್ರಗತಿ
ಕಂಡುಬರದ
ಹಿನ್ನಲೆಯಲ್ಲಿ
ಪ್ರಕರಣವನ್ನು
ರಾಷ್ಟ್ರೀಯ
ತನಿಖಾ
ಸಂಸ್ಥೆ
(ಎನ್ಐಎ)ಗೆ
ವಹಿಸಲಾಗಿದೆ.
ಈ
ಬಾಂಬ್
ಸ್ಫೋಟ
ಪ್ರಕರಣದಲ್ಲಿ
ಒಬ್ಬರು
ಮಹಿಳೆ
ಮೃತಪಟ್ಟು
ಮೂವರು
ಗಾಯಗೊಂಡಿದ್ದರು.
[ಬಾಂಬ್
ಸ್ಫೋಟದ
ತನಿಖೆ
ಎನ್
ಐಎ
ಹೆಗಲಿಗೆ?]
ಬಾಂಬ್ ಸ್ಫೋಟ ನಡೆದು ಆರು ತಿಂಗಳ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣದ ತನಿಖೆಯನ್ನು ಆರಂಭಿಸಲಿದೆ. ಪ್ರಾಥಮಿಕವಾಗಿ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೂ ಬೆಂಗಳೂರು ಸ್ಫೋಟಕ್ಕೂ ಸಂಬಂಧವಿರಬಹುದು ಎಂದು ಎನ್ಐಎ ಶಂಕಿಸಿದೆ. [ಚರ್ಚ್ ಸ್ಟ್ರೀಟ್ ಸ್ಫೋಟ ತನಿಖೆಗೆ ಎಳ್ಳು-ನೀರು!]
ಅಂದು ಏನಾಗಿತ್ತು? : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿರುವ ಕೋಕೋನಟ್ ಗ್ರೋವ್ ಹೋಟೆಲ್ ಬಳಿ ಡಿ.28ರ ಭಾನುವಾರ ಸಂಜೆ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆ ಗುಂಗಿನಲ್ಲಿದ್ದ ಉದ್ಯಾನಗರಿಯ ಜನರು ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡಿದ್ದರು.
ಸ್ಫೋಟದ ತನಿಖೆ ಆರಂಭಿಸಿದ ಬೆಂಗಳೂರು ಪೊಲೀಸರ ವಿಶೇಷ ತಂಡ ಅಕ್ಕಪಕ್ಕದ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿತ್ತು. ಬಿಹಾರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತನಾದ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಆದರೆ, ನಿಖರ ಮಾಹಿತಿ ಮಾತ್ರ ಲಭ್ಯವಾಗಿರಲಿಲ್ಲ.