ಎಚ್ಚರ ! ಬಲಿಗಾಗಿ ಕಾದಿವೆ, ಬೆಂಗ್ಳೂರ್ ರಸ್ತೆಗುಂಡಿಗಳು
ಬೆಂಗಳೂರು, ಜುಲೈ 29: ಮುಂಗಾರು, ಹಿಂಗಾರು, ಸೈಕ್ಲೋನ್ ಯಾವುದೇ ಮಳೆ ಬರಲಿ ತೆಪ್ಪಗೆ ನಿದ್ದೆ ಮಾಡುವುದೇ ನಮ್ಮ ಕೆಲಸ ಎಂಬಂತೆ ವರ್ತಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತೊಮ್ಮೆ ಮೈಕೊಡವಿಕೊಂಡು ಏಳಬೇಕಿದೆ. ರಸ್ತೆಗುಂಡಿಗಳು ಬಲಿಗಾಗಿ ಕಾದಿವೆ.
ಸುಮಾರು ಹತ್ತು ವರ್ಷಗಳ ಬಳಿಕ ಬೆಂಗಳೂರು ದಕ್ಷಿಣ ಭಾಗದ ಬೇಗೂರು ಹೋಬಳಿಯಲ್ಲಿ ಭಾರಿ ಮಳೆ ಕಂಡು ಬಂದಿದೆ. ಬೇಗೂರು ಕೆರೆ, ಕೋಡಿ ಚಿಕ್ಕನಹಳ್ಳಿ, ಮಡಿವಾಳ ಕೆರೆಗಳು ಕೋಡಿ ಹರಿದಿವೆ. [ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]
2015ರಲ್ಲಿ
ರಸ್ತೆಗುಂಡಿಗಳಿಂದ
38
ಜನ
ಬಲಿಯಾಗಿದ್ದರೆ,
176
ಮಂದಿ
ತೀವ್ರವಾಗಿ
ಗಾಯಗೊಂಡಿದ್ದಾರೆ.
182ಕ್ಕೂ
ಅಧಿಕ
ಅಪಘಾತ
ಪ್ರಕರಣಗಳು
ದಾಖಲಾಗಿವೆ.
ಕರ್ನಾಟಕದಲ್ಲಿ 82 ಸಾವು ನೋವಿಗೆ ರಸ್ತೆ ರಿಪೇರಿ, ರಸ್ತೆ ಗುಂಡಿಯೇ ಕಾರಣವಾಗಿದೆ. ಅವೈಜ್ಞಾನಿಕ ಹಂಪ್ ಗಳಿಂದ ಕೂಡಾ ಅನೇಕ ಸಾವುಗಳನ್ನು ರಾಜ್ಯ ಕಂಡಿದೆ.
ಮಳೆ ಬಂದಾಗ ರಸ್ತೆಗಿಳಿಯಲು ಭಯವಾಗಲು ಕಾರಣ ಅವೈಜ್ಞಾನಿಕ ಹಂಪ್ಸ್, ರಸ್ತೆಗುಂಡಿಗಳು, ತೆರೆದ ಮ್ಯಾನ್ ಹೋಲ್ ಗಳು (2 ಲಕ್ಷಕ್ಕೂ ಅಧಿಕ ಇವೆ). ಹೋಗಲಿ ಮರದ ಕೆಳಗೆ ನಿಲ್ಲೋಣ ಎಂದರೆ ಮರ ಯಾವಾಗ ತಲೆ ಮೇಲೆ ಬೀಳುತ್ತದೆಯೋ ಎಂಬ ಭಯ.
10 ಕಂಟ್ರೋಲ್ ರೂಮ್ ಗಳಿವೆ, 24X7 ಅವಧಿ ಕಾರ್ಯನಿರ್ವಹಿಸುತ್ತದೆ. ಬಿಬಿಎಂಪಿ ಸಹಾಯವಾಣಿ ಸಂಖ್ಯೆ ಈ ಲಿಂಕ್ ನಲ್ಲಿ ಲಭ್ಯ