ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್
ಬೆಂಗಳೂರು, ಅಕ್ಟೋಬರ್ 05: ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ಮೇಯರ್ ಜಿ ಪದ್ಮಾವತಿ ಹೇಳಿದ್ದಾರೆ.
ಮಹದೇವಪುರ
ವಲಯದ
ಬಿಬಿಎಂಪಿ
ಸಹಾಯಕ
ಇಂಜಿನಿಯರ್(ಎಇ)
ರಾಘವೇಂದ್ರ,
ಎಇಇ
ಕೋದಂಡ
ರೆಡ್ಡಿ
ಸಸ್ಪೆಂಡ್
ಮಾಡಿ
ಬಿಬಿಎಂಪಿ
ಆಯುಕ್ತ
ಮಂಜುನಾಥ್
ಪ್ರಸಾದ್
ಅವರು
ಅದೇಶ
ಹೊರಡಿಸಿದ್ದಾರೆ.
[ಕಟ್ಟಡದ
ಅವಶೇಷಗಳಡಿ
ಸಿಲುಕಿ
ಇಬ್ಬರು
ಸಾವು,
4
ಮಂದಿ
ರಕ್ಷಣೆ]
ಬುಧವಾರ ನಡೆದ ಈ ಘಟನೆಯಲ್ಲಿ ಪಕ್ಕದ ಕಟ್ಟಡದ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರ ಶವ ಪತ್ತೆಯಾಗಿದ್ದು, ಐದು ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ನಾಲ್ವರ ರಕ್ಷಣೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳಿದ್ದಾರೆ.[ಗ್ಯಾಲರಿ: ಬೆಳ್ಳಂದೂರು ಕಟ್ಟಡ ಕುಸಿತದ ಅವಶೇಷಗಳು]
ಇದಕ್ಕೂ
ಮುನ್ನ
ಬಿಬಿಎಂಪಿ
ಮಹದೇವಪುರ
ವಲಯದ
ಜಂಟಿ
ಆಯುಕ್ತ
ಮುನಿವೀರಪ್ಪ
ಅವರು
ಕಟ್ಟಡದ
ವಿವರಗಳನ್ನು
ನೀಡಿದ್ದರು.
2015ರ
ಆಗಸ್ಟ್
13ರಂದು
ಕಟ್ಟಡ
ನಿರ್ಮಾಣದ
ಅನುಮತಿ
ನೀಡಲಾಗಿದೆ.
ಆಂಧ್ರಪ್ರದೇಶ
ಮೂಲದ
ಬಿಲ್ಡರ್
ವಿನಯ್
ಕುಮಾರ್
ದೋಂಗಲು
ಅವರು
6
ತಿಂಗಳ
ಹಿಂದೆ
ಕಾಮಗಾರಿ
ಆರಂಭಿಸಿದ್ದರು.
ಅನುಮತಿ ಇರಲಿಲ್ಲ: ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ನಾಲ್ಕು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳುಗಳ ಹಿಂದೆ ನೋಟಿಸ್ ಜಾರಿಗೊಳಿಸಲಾಗಿತ್ತು. ಕಟ್ಟಡ ಅನಧಿಕೃತವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಬಿಬಿಎಂಪಿ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದರೆ ಅವರ ಮೇಲೂ ಕ್ರಮ ಜರುಗಿಸುತ್ತೇವೆ ಎಂದಿದ್ದರು. ಅದರಂತೆ, ಕ್ರಮ ಜರುಗಿಸಲಾಗಿದೆ.