ಸಿಎ ನಿವೇಶನ ದುರ್ಬಳಕೆ: ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ನೋಟಿಸ್
ಬೆಂಗಳೂರು, ಜನವರಿ 05: ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ 7 ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ಶುಕ್ರವಾರ ನೋಟಿಸ್ ನೀಡಿದೆ.
ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ 7 ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ನೋಟಿಸ್ ನೀಡಿದೆ. ಕನ್ನಡ ಶಾಲೆ ನಿರ್ಮಾಣ ಬದಲಿಗೆ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಕ್ಕೆ ವಂಚನೆ ನಡೆದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ
ಕನ್ನಡ ಶಾಲೆಗಳಿಗೆ ಅನುಮತಿ ಪಡೆದು ಇಂಗ್ಲೀಷ್ ಶಾಲೆಗಳ ಸ್ಥಾಪನೆ ಮಾಡಲಾಗಿದೆ. ಬಿಡಿಎ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಶಿಕ್ಷಣ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಕ್ರಮ ಕೈಗೊಂಡಿರುವ ಬಗ್ಗೆ ಉತ್ತರ ನೀಡಲು ಬಿಡಿಎ ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.
ಬಿಡಿಎ ಸೈಟನ್ನು ಯಾರಾದರೂ ಕೈಗೆಟುಕುವ ಬೆಲೆ ಅನ್ನುವುದಕ್ಕೆ ಸಾಧ್ಯವಾ?
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 15 ದಿನದೊಳಗೆ ಉತ್ತರ ನೀಡುವಂತೆ ಬಿಡಿಎಗೆ ಸೂಚನೆ ನೀಡಲಾಗಿದೆ. ಬಿಇಎಲ್ ಬಳಿ ಇರುವ ಮಾರುತಿ ವಿದ್ಯಾಮಂದಿರ, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ - ಚಂದ್ರಾ ಬಡಾವಣೆ, ಗಂಗ ರವೀಂದ್ರನಾಥ ಠಾಗೋರ್ - ಬನಶಂಕರಿ, ಕರ್ನಾಟಕ ಅಂಗವಿಕಲ ಸಂಘ - ಎಚ್ಎಎಲ್ ರೋಡ್, ಸೈರಾ ಎಜುಕೇಶನ್ ಸೊಸೈಟಿ - ಕುಂದಲಹಳ್ಳಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್ - ಎಚ್ಬಿಆರ್ 2ನೇ ಹಂತ, ಶ್ರೀ ಬಸವೇಶ್ವರ ಮಹಾವಿದ್ಯಾಲಯ - ಒಎಂಬಿಆರ್ ಬಡಾವಣೆ ಇವುಗಳು ಸಿಎ ನಿವೇಶನವನ್ನು ದುರ್ಬಳಕೆ ಮಾಡಿಕೊಂಡಿವೆ.