ಬಿಬಿಎಂಪಿ ವಿಭಜನೆ : ಏ.20ಕ್ಕೆ ವಿಶೇಷ ಅಧಿವೇಶನ
ಬೆಂಗಳೂರು, ಏ. 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕು ಎಂದು ತೀರ್ಮಾನಿಸಿರುವ ಸರ್ಕಾರ ಕೊನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇದಕ್ಕಾಗಿ ಏ.20ರ ಸೋಮವಾರ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆದಿದೆ.
ಬಿಬಿಎಂಪಿ
ವಿಭಜನೆ
ಕುರಿತ
ಸುಗ್ರೀವಾಜ್ಞೆಯನ್ನು
ರಾಜ್ಯಪಾಲ
ವಜುಭಾಯಿ
ವಾಲಾ
ವಾಪಸ್
ಕಳಿಸಿದ್ದಾರೆ.
ಮೇ
30ರೊಳಗೆ
ಚುನಾವಣೆ
ನಡೆಸುವಂತೆ
ಹೈಕೋರ್ಟ್
ಆದೇಶ
ನೀಡಿದೆ.
ಚುನಾವಣಾ
ಆಯೋಗ
ವೇಳಾಪಟ್ಟಿ
ಪ್ರಕಟಿಸಲು
ಸಿದ್ಧತೆ
ನಡೆಸುತ್ತಿದೆ.
[ಬಿಬಿಎಂಪಿ
ಚುನಾವಣೆ
:
ಸರ್ಕಾರಕ್ಕೆ
ಹಿನ್ನಡೆ]
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸರ್ಕಾರ ಪಾಲಿಕೆ ವಿಭಜನೆ ಸುಗ್ರೀವಾಜ್ಞೆಗೆ ಸದನದ ಒಪ್ಪಿಗೆ ಪಡೆಯಲು ತೀರ್ಮಾನಿಸಿದೆ. ಅದಕ್ಕಾಗಿ ಏ.20ರಂದು ವಿಶೇಷ ಅಧಿವೇಶನವನ್ನು ಕರೆದಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ, ಮಧ್ಯಾಹ್ನ 2 ಗಂಟೆಗೆ ವಿಧಾನ ಪರಿಷತ್ತಿನ ಕಲಾಪ ಆರಂಭವಾಗಲಿದೆ.[ಬಿಬಿಎಂಪಿ ವಿಭಜನೆ ಹೇಗೆ?]
ಜಟಾಪಟಿ ಸಾಧ್ಯತೆ : 198 ವಾರ್ಡ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. [ಅಖಂಡ ಬೆಂಗಳೂರನ್ನು ಒಡೆಯಬೇಡಿ : ಬಿಜೆಪಿ ಒತ್ತಾಯ]
ಆದರೆ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದು ಪಾಲಿಕೆಯನ್ನು ವಿಭಜನೆ ಮಾಡಬಾರದು ಎಂದು ಒತ್ತಾಯಿಸುತ್ತಿವೆ ಮತ್ತು ಈ ಕುರಿತು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ. ಶುಕ್ರವಾರವೂ ಬಿಜೆಪಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದೆ.
ಮೇ.30ರೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ನೇತೃತ್ವದ ವಿಭಾಗೀಯ ಪೀಠ ಏ.20ಕ್ಕೆ ಮುಂದೂಡಿದೆ. ಆದ್ದರಿಂದ ಏ.20 ಸರ್ಕಾರದ ಪಾಲಿಕೆ ಮಹತ್ವದ ದಿನವಾಗಿದೆ.