ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು
ಬೆಂಗಳೂರು, ಆಗಸ್ಟ್ 9: ಬಿಬಿಎಂಪಿಯು ಸ್ವಚ್ಛ ಭಾರತ ಅಭಿಯಾನದಡಿ ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಬಿಬಿಎಂಪಿ ದುರ್ಬಳಕೆ ಮಾಡಿಕೊಂಡಿದೆ.
ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ
ಕೇಂದ್ರವು ಸ್ವಚ್ಛ ಭಾರತ ಅಭಿಯಾನದಡಿ ಮೀಸಲಿಟ್ಟಿರುವ 153 ಕೋಟಿ ರೂ. ಹಣದಲ್ಲಿ 23 ಕೋಟಿ ರೂ. ಹಣವನ್ನು ಬೆಂಗಳೂರು ಸ್ವಚ್ಛತೆಗಾಗಿ ಮೀಸಲಿಡಲಾಗಿದೆ. ಈ ಅನುದಾನವನ್ನು ಬಿಬಿಎಂಪಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೇಂದ್ರ ಮೀಸಲಿಟ್ಟಿರುವ ಹಣ ಬೆಂಗಳೂರನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ವಿನಿಯೋಗಿಸಬೇಕಿತ್ತು. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ನಿವಾರೊಸಬಹುದಿತ್ತು, ಆದರ ಬದಲು ಆ ಹಣದಲ್ಲಿ ಕಟ್ಟಡ ಕಾಮಗಾರಿ,ಶಾಲಾ ಆಟದ ಮೈದಾನ, ಚರಂಡಿ ರಿಪೇರಿಕೆ ಹಣವನ್ನು ಬಳಕೆ ಮಾಡಿದೆ. ಈ ಕುರಿತು ಸಾಮಾಜಿಕ ಹೋರಾಟಗಾರರಾದ ಅಮರೇಶ್ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Comments
English summary
Social worker Amaresh has written letter to prime minister's office on misuse of Swachcha Bharat fund for building construction. Following this, chief minister's office has sent information regarding.
Story first published: Thursday, August 9, 2018, 15:15 [IST]