ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ
ಬೆಂಗಳೂರು, ಡಿಸೆಂಬರ್ 11: ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಜೀವ ಬಂದಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹೊಸ ವರ್ಷ ಅಂಗವಾಗಿ 8 ಸಾವಿರ ನಿವೇಶನ ಹಂಚಿಕೆಗೆ ಮುಂದಾಗಿದೆ.
ಈಗಾಗಲೇ ಬಿಡಿಎ ಮೊದಲ ಹಂತದಲ್ಲಿ ೫ ಸಾವಿರ ನಿವೇಶನವನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿದ್ದು ೨೨೦೦ ನಿವೇಶನಗಳನ್ನು ಯೋಜನೆಗಾಗಿ ಮುಂಬರುವ ಜನವರಿಯಲ್ಲಿ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸಲಾಗವುದು.
ಆ ವೇಳೆ 5 ಸಾವಿರ ನಿವೇಶನಗಳನ್ನು ಆಸಕ್ತರಿಗೆ ನೀಡಲು ಆಲೋಚಿಸಲಾಗಿತ್ತು ಈ ಪೈಕಿ 3 ಸಾವಿರ ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಲಾಗುವುದು ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ತಿಳಿಸಿದರು.
ಅರ್ಕಾವತಿ ಬಡಾವಣೆ ಯೋಜನೆಯ ಡಿನೋಟಿಫಿಕೇಷನ್ ವೇಳೆ ಭೂಮಿ ಕಳೆದುಕೊಂಡವರಿಗೂ ಕೂಡ ಕೆಂಪೇಗೌಡ ಬಡಾವಣೆಗೆ ಅರ್ಜಿ ಸಲ್ಲಿಸಬಹುದು. ಅವರ ಅರ್ಜಿಗಳನ್ನೂ ಕೂಡ ಪರಿಗಣಿಸಲಾಗುತ್ತದೆ. 5 ಸಾವಿರ ಬಿಡಿಎ ನಿವೇಶನಗಳ ಪೈಕಿ ಅರ್ಧದಷ್ಟು ಜೆನರಲ್ ಕೆಟಗರಿಯಲ್ಲಿ ನೀಡಲಾಗುವುದು ಎಂದು ಹೇಳಿದರು.
ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ಅನೇಕರು ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ವೇಳೆ ಅರ್ಜಿ ಸಲ್ಲಿಸಿದ್ದರು. ಕೆಲವರಿಗೆ ಮಾತ್ರ ನಿವೇಶನಗಳು ಸಿಕ್ಕಿತ್ತು. ಈ ಬಾರಿ ಅರ್ಜಿ ಸಲ್ಲಿಸುವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅರ್ಕಾವತಿಗಾಗಿ ಭೂಮಿ ಕಳೆದುಕೊಂಡವರ ವೇದಿಕೆ ಅಭಿಪ್ರಾಯ ಪಟ್ಟಿದೆ.