ಚಿಣ್ಣರಿಗಾಗಿ ಬಾಲಭವನದಲ್ಲಿ ಬೇಸಿಗೆ ಶಿಬಿರ
ಬೆಂಗಳೂರು ಏಪ್ರಿಲ್ 12: ಹಿಂದೆಲ್ಲಾ ಬೇಸಿಗೆ ರಜೆ ಅಂದ್ರೆ ಮಕ್ಕಳು ಅಜ್ಜಿ-ಅಜ್ಜನ ಮನೆ ಕಡೆ ಮುಖ ಮಾಡ್ತಿದ್ರು.. ಆದರೆ, ಬದಲಾದ ಕಾಲದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಹಾಗೆ ಇಲ್ಲೊಂದು ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಅಲ್ಲದೆ ಸ್ನೇಹಿತರೊಂದಿಗೆ ಮಸ್ತ್ ಎಂಜಾಯ್ ಮಾಡುತ್ತಾರೆ.ಶಾಲಾ ಕಲಿಕೆಯಲ್ಲಿ ಹೈರಾಣಾಗಿದ್ದ ಮಕ್ಕಳು, ಈಗ ಬೇಸಿಗೆಯಲ್ಲಿ ಕಲಿಕೆಯೊಂದಿಗೆ ಬೇಸಿಗೆಯ ಮಜಾ ಅನುಭವಿಸ್ತಿದ್ದಾರೆ. ಸಂಗೀತ, ಯೋಗ, ಕರಾಟೆ, ಕರಕುಶಲಕಲೆ, ಜೇಡಿಮಣ್ಣಿನ ಕಲೆ, ತಬಲ, ಗಿಟಾರ್, ನೃತ್ಯ, ರಂಗತರಬೇತಿ ಒಳಗೊಂಡಂತೆ 8 ರಿಂದ 25 ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವ ಅವಕಾಶವನ್ನ ಕಬ್ಬನ್ ಪಾರ್ಕ್ನಲ್ಲಿರೋ ಬಾಲಭವನದಲ್ಲಿ ಕಲ್ಪಿಸಲಾಗಿದೆ. ಏಪ್ರಿಲ್ 16 ರಿಂದ ಆರಂಭಗೊಂಡಿರುವ ಶಿಬಿರ ಮೇ 13 ರವರೆಗೆ ನಡೆಯಲಿದೆ.
ಈ ವಿಶೇಷ ಮಾದರಿಯ ಬೇಸಿಗೆ ಶಿಬಿರ ಬಾಲಭವನದ ಸ್ವಚ್ಚಂದ ಹಾಗೂ ಮಕ್ಕಳ ಸ್ನೇಹೀ ವಾತಾವರಣದಲ್ಲಿ ಆಯೋಜಿಸಲಾಗಿದ್ದು 5 ರಿಂದ 16 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದೆ.
ಈ ಬೇಸಿಗೆ ಶಿಬಿರದಲ್ಲಿ ಕರಾಟೆ, ಯೋಗ, ಚಿತ್ರಕಲೆ, ಕರಕುಶ ಕಲೆ, ಜೇಡಿ ಮಣ್ಣಿನ ಕಲೆ, ಗಿಟಾರ್ ,ತಬಲ, ಕೀಬೋರ್ಡ್, ಸಮೂಹ ನೃತ್ಯ, ಸಮೂಹ ಗೀತೆ, ಜ್ಯೂವೆಲರಿ ಮೇಕಿಂಗ್, ಆರ್ಟ್ ವರ್ಕ್ ವಿತ್ ಮೆಹಂದಿ, ಕಸದಿಂದ ರಸ, ಯಕ್ಷಗಾನ, ಫರ್ ಡಾಲ್, ರೋಬೋಟಿಕ್ಸ್, ಎಂಬ್ರಾಯಿಡರಿ, ರಂಗ ತರಬೇತಿ, ಅಲ್ಯೂಮಿನಿಯಂ ಫಾಯಿಲ್ ವರ್ಕ್, ಮೆಟಲ್ ಎಂಬೋಸಿಂಗ್, ಬಾಟಿಕ್ - ಟೈ ಅಂಡ್ ಡೈ ಮತ್ತು ವಿಜ್ಞಾನ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ವಿಶೇಷ ಆಕರ್ಷಕ ಚಟುವಟಿಕೆಗಳನ್ನು ಈ ಬೇಸಿಗೇ ಶಿಬಿರದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ಬಾಲ ಭವನದ ಕಾರ್ಯದರ್ಶಿ ಶ್ರೀಮತಿ ದಿವ್ಯಾ ನಾರಾಯಣಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22864189 ಸಂಪರ್ಕಿಸಬಹುದು.