ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕಾಶವಾಣಿ-ದೂರದರ್ಶನ ನೌಕರರ ಪ್ರತಿಭಟನೆ: ಸಮಸ್ಯೆ ಏನಂತೀರಾ?

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 2: ಉದ್ಯೋಗ ಬಡ್ತಿಯಲ್ಲಿ ವಿಳಂಬ ಧೋರಣೆ, ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿರುವುದು, ಕಾರ್ಯಕ್ರಮ ಮಾಡಲು ಅನುದಾನ ನೀಡದಿರುವದು ಮುಂತಾದ ಬೇಡಿಕೆಯನ್ನಿಟ್ಟು, ಆಕಾಶವಾಣಿ ಮುಖ್ಯದ್ವಾರದ ಎದುರು ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿಯವರು ಪ್ರತಿಭಟನೆಯನ್ನು ನಡೆಸಿದರು.

ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಹೂ ವಿತರಣೆಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಹೂ ವಿತರಣೆ

ಭಾರತೀಯ ಪ್ರಸಾರ ಸೇವೆಯ 810 ಉನ್ನತ ಹುದ್ದೆಗಳಿದ್ದು, ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಜನ ಸಿಬ್ಬಂದಿಯವರು ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ ಎಂದು ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿಯ ಸಂಯೋಜಕ ಎಸ್. ಬಸವರಾಜ ತಮ್ಮ ಭಾಷಣದಲ್ಲಿ ತಿಳಿಸಿದರು.

AIR and Doordarshan employees agitation seeking promotion

ಮುಂದುವರೆದು ಸರಕಾರದ ನೇರ ಸುಪರ್ದಿಯಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನದ ಸಿಬ್ಬಂದಿ ಇಂದು ಹೊರಳು ಹಾದಿಯಲ್ಲಿದ್ದಾರೆ. ಅವರ ಗೋಳನ್ನು ಯಾರೂ ಕೇಳುವವರಿಲ್ಲ. ನಿಗದಿತ ಸಮಯದಲ್ಲಿ ಎಲ್ಲಾ ಹುದ್ದೆಗಳನ್ನು ತುಂಬುವ ಕೆಲಸ ಪ್ರಸಾರ ಭಾರತಿ ಮಾಡಬೇಕು ಎಂದು ಒತ್ತಿ ಹೇಳಿದರು.

AIR and Doordarshan employees agitation seeking promotion

ಪ್ರತಿಭಟನೆಯಲ್ಲಿ ನಿಲಯದ ವಿನೋದಕುಮಾರ, ಅಶೋಕ, ಎಸ್.ಎಸ್. ಚೋಳಿನ ದೂರದರ್ಶನ ಕೇಂದ್ರದ ಹರೀಶ, ಪ್ರದೀಪ, ಮೋಹನಕುಮಾರ್‌, ಕಾರ್ಯಕ್ರಮ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

English summary
Hundreds of employees of Air India and Doordarshan were held protest seeking promotion and opposed recruitment of contract employees in front of All India Radio regional office in Bengaluru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X